ಮಂಗಳೂರು : ಮಂಗಳೂರು ನಗರದ ಬಿಕರ್ನಕಟ್ಟೆ ಹೆದ್ದಾರಿಯ ಕೈಕಂಬ ಬಳಿ ಭಾನುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಚಲಿಸುತ್ತಿದ್ದ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ಧಾರಾಕಾರವಾಗಿ ಮಳೆ ಸುರಿಯುತ್ತಿರುವಾಗಲು ಕಾರಿನ ಬಾನೆಟ್ನಿಂದ ಹೊಗೆ ಬರುತ್ತಿರುವುದನ್ನು ಮೊದಲು ಚಾಲಕ ಗಮನಿಸಿದ್ದು,ಆದ್ದರಿಂದ ಎಲ್ಲಾ ಸ್ಥಳೀಯರು ನೋಡುನೋಡುತ್ತಲೇ ಇರುವಾಗ ದಟ್ಟಣೆ ಬೆಂಕಿ ಆವರಿಸಿ ಸುಟ್ಟು ಕರಗಳಾಗಿದೆ. ವಾಹನದಲ್ಲಿದ್ದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು ಯಾವುದೇ ಹಾನಿ ಸಂಭವಿಸಿಲ್ಲವೆಂದು ಮೂಲಗಳು ತಿಳಿಸಿವೆ.


