Monday, March 17, 2025
Flats for sale
Homeಕ್ರೈಂಚೆನ್ನೈ : ಕುಡಿದು ಬಂದು ಕಿರುಕುಳ ನೀಡುತಿದ್ದ ಗಂಡನ ಮೇಲೆ ಕಾದ ಎಣ್ಣೆ ಸುರಿದು ಹತ್ಯೆ..!

ಚೆನ್ನೈ : ಕುಡಿದು ಬಂದು ಕಿರುಕುಳ ನೀಡುತಿದ್ದ ಗಂಡನ ಮೇಲೆ ಕಾದ ಎಣ್ಣೆ ಸುರಿದು ಹತ್ಯೆ..!

ಚೆನ್ನೈ : ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದ ಗಂಡನ ಮೇಲೆ ಕಾದ ಎಣ್ಣೆ ಸುರಿದು ಪತ್ನಿಯೊಬ್ಬಳು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ.

ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಪುದುನಲ್ಲೂರುನ ಮೀನು ವ್ಯಾಪಾರಿಯಾಗಿದ್ದ ರವಿ ಎಂಬಾತ 20 ವರ್ಷಗಳ ಹಿಂದೆ ಜಯಂತಿ ಎಂಬ ಮಹಿಳೆಯನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ರವಿ ದಿನವೂ ಕುಡಿದು ಮನೆಗೆ ಬರುತ್ತಿದ್ದನು ಮತ್ತು ಪ್ರತಿದಿನ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದನು. ಇದರಿಂದ ಪತಿ-ಪತ್ನಿಯ ನಡುವೆ ಜಗಳ ಉಂಟಾಗಿತ್ತು. ಒಂದು ಹಂತ ದಲ್ಲಿ ಪತಿಯ ಕ್ರೌರ್ಯವನ್ನು
ಸಹಿಸಲಾಗದೆ ಜಯಂತಿ ಅಡುಗೆ ಎಣ್ಣೆಯನ್ನು ಕುದಿಸಿ ಮಲಗಿದ್ದ ರವಿಯ ಮೇಲೆ ಸುರಿದಿದ್ದಾಳೆ.

ರವಿ ಗಂಭೀರವಾಗಿ ಗಾಯಗೊಂಡಿದ್ದು, ಚೆನ್ನೈ ನ ಕಿಲ್ಪಾಕ್ಕಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊAಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರಿಂದ ಜಯಂತಿಯನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದ್ದಾರೆ. ಪತಿ ಮಾಡಿದ ದೌರ್ಜನ್ಯವನ್ನು ಸಹಿಸಲಾಗದೆ ಇಲ್ಲಿಯವರೆಗೆ ಎರಡು ಬಾರಿ ಪತಿಯನ್ನು ಕೊಲ್ಲಲು ಯತ್ನಿಸಿರುವುದಾಗಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular