ಮಂಗಳೂರು : ಡಿಸೆಂಬರ್ 21 ರಂದು ಉಪಾಹಾರ ಗೃಹದಲ್ಲಿ ಯುವ ಜೋಡಿಗೆ ಕಿರುಕುಳ ನೀಡಿ ನೈತಿಕ ಪೊಲೀಸಗಿರಿ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಂಟ್ವಾಳ ಮೂಲದ ಸಂದೇಶ್ (28), ಪ್ರಶಾಂತ್ (31), ರೋನಿತ್ (31) ಎಂದು ಗುರುತಿಸಲಾಗಿದೆ.
ಹಂಪನಕಟ್ಟೆಯ ಗುಡ್ ಟೈಮ್ ಶಾರ್ಟ್ ಈಟ್ಸ್ ಶಾಪ್ ಬಳಿ ಯುವ ಜೋಡಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ಡಿಸೆಂಬರ್ 21 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂದೇಶ್ ನಗರದ ಹೋಟೆಲೊಂದರಲ್ಲಿ ಕೇರಳದ ಹುಡುಗ ಮತ್ತು ಹುಡುಗಿಯನ್ನು ಪ್ರಶ್ನಿಸಿದ್ದು ನೀವು ಯಾವ ಧರ್ಮದವರು ಇಲ್ಲಿ ಏನು ಮಾಡುತ್ತಿರುವಿರಿ ಎಂದು ಹುಡುಗ ಮೇಲೆ ಹಲ್ಲೆ ನಡೆಸಲು ಯತ್ನ ನಡೆದಿದೆ. ಪ್ರತ್ಯಕ್ಷದರ್ಶಿಗಳು ಯುವಕ ಕೂಗುವ ದೃಶ್ಯವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಪರಿಸ್ಥಿತಿಯಿಂದ ತಪ್ಪಿಸಲು ಪ್ರಯತ್ನಿಸಿದ ಜೋಡಿಗಳು ಆಟೋ-ರಿಕ್ಷಾವನ್ನು ಹತ್ತಿದರು. ಸಂದೇಶ್ ಆಟೋ ರಿಕ್ಷಾ ನಿಲ್ಲಿಸಲು ಪಟ್ಟುಹಿಡಿದು ಚಾಲಕನನ್ನು ಗದರಿಸಿದ್ದಾನೆ. ಸಾರ್ವಜನಿಕರು ಮಧ್ಯಪ್ರವೇಶಿಸಿ, ಗುಂಪನ್ನು ಚದುರಿಸಿದ್ದು ಮತ್ತು ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಪ್ಪಿಸಿದ್ದಾರೆ.
ಆಟೋ ರಿಕ್ಷಾ ಚಾಲಕನ ದೂರಿನ ಮೇರೆಗೆ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿಗಳಾದ ಸಂದೇಶ್ ಮತ್ತು ಘಟನಾ ಸ್ಥಳದಲ್ಲಿದ್ದ ಇತರ ಇಬ್ಬರು ಸಹಚರರಾದ ಪ್ರಶಾಂತ್ ಮತ್ತು ರೋನಿತ್ ಅವರನ್ನು ಬಂಧಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ.


