Thursday, March 27, 2025
Flats for sale
HomeUncategorizedದೇವೇಗೌಡ ವಿರುದ್ಧ ಅವಹೇಳನಕಾರಿ ಹೇಳಿಕೆ - ನಳೀನ್ ವಿರುದ್ಧ ಜೆ.ಡಿ.ಎಸ್ ಪ್ರತಿಭಟನೆ.

ದೇವೇಗೌಡ ವಿರುದ್ಧ ಅವಹೇಳನಕಾರಿ ಹೇಳಿಕೆ – ನಳೀನ್ ವಿರುದ್ಧ ಜೆ.ಡಿ.ಎಸ್ ಪ್ರತಿಭಟನೆ.

ಮಂಗಳೂರು: ಜೆಡಿಎಸ್ ಹಾಗೂ ದೇವೇಗೌಡ ವಿರುದ್ಧ ನಳಿನ್ ಕುಮಾರ್ ಕಟೀಲ್ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಖಂಡಿಸಿ ಯುವ ಜೆಡಿಎಸ್ ನಾಯಕರಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.

ಮಂಗಳೂರು ನಗರದ ಕದ್ರಿ ಸರ್ಕ್ಯೂಟ್ ಹೌಸ್ ಮುಂಭಾಗ ಜೆಡಿಎಸ್ ಕಾರ್ಯಕರ್ತರು ನಳಿನ್ ಕುಮಾರ್ ಕಟೀಲ್ ಕ್ಷಮೆ ಕೇಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಕದ್ರಿ ಠಾಣೆ ಪೊಲೀಸರು ವಶಕ್ಕೆ ಪಡೆದರು.

ಕದ್ರಿಯ ಸರ್ಕ್ಯೂಟ್ ಹೌಸ್ ಗೆ ನಳಿನ್ ಕುಮಾರ್ ಕಟೀಲ್ ಬರುವ ಮಾಹಿತಿ ಪಡೆದಿದ್ದ ಕಾರ್ಯಕರ್ತರು ಜೆಡಿಎಸ್ ಯುವನಾಯಕ ಅಕ್ಷಿತ್ ಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು .

ಬೇರೆ ಏನೋ ಕಾರ್ಯಕ್ರಮದ ಹಿನ್ನೆಲೆ ನಳಿನ್ ಕುಮಾರ್ ಕಟೀಲ್ ಸರ್ಕ್ಯೂಟ್ ಹೌಸ್ ಗೆ ಬರಲು ಸಾಧ್ಯವಾಗಲಿಲ್ಲ.

RELATED ARTICLES

LEAVE A REPLY

Please enter your comment!
Please enter your name here

Most Popular