ಬೆಂಗಳೂರು : ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಉಂಗುರ ಬದಲಿಸಿಕೊಂಡು ಕುಟುಂಬದ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ. ಈ ಅದ್ದೂರಿ ಸಮಾರಂಭಕ್ಕೆ ಸ್ಯಾಂಡಲ್ವುಡ್, ರಾಜಕೀಯ, ಉದ್ಯಮದ ಹಲವು ಗಣ್ಯರು ಆಗಮಿಸಿ ಶುಭಕೋರಿದ್ದಾರೆ.




ನವ ಜೋಡಿಗೆ ಯಶ್ ಮತ್ತು ರಾಧಿಕಾ ಹಾಗೂ ಹಲವು ನಟ ದಿಗ್ಗಜರು ಆಗಮಿಸಿ ಶುಭ ಹಾರೈಸಿದ್ದಾರೆ. ಸಚಿವ ಆರ್. ಅಶೋಕ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಿದರು. ನಟ ದರ್ಶನ್ ಸಹ ಈ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿ ಅಭಿ ಮತ್ತು ಅವಿವಾಗೆ ವಿಶ್ ಮಾಡಿದರು.