ಬನವಾಸಿ : ಶಬರಿಮಲೆ ಅಯ್ಯಪ್ಪನ ಕ್ಷೇತ್ರಕ್ಕೆ ಅಂಜನಾದ್ರಿ ಬೆಟ್ಟದಿಂದ 10ನೇ ವರ್ಷದ ಪಾದಯಾತ್ರೆಯಲ್ಲಿ ಸಾಗುತ್ತಿರುವ ಭಟ್ಕಳ ಮೂಲದ ಅಯ್ಯಪ್ಪ ವೃತಧಾರಿ ಹರೀಶ ಅವರು ಬನವಾಸಿಯ ವರದಾ ಚೌಡೇಶ್ವರಿ ಅಯ್ಯಪ್ಪ ಸನ್ನಿಧಾನಕ್ಕೆ ಶನಿವಾರ ಆಗಮಿಸಿದರು.
ಹತ್ತು ವರ್ಷಗಳಿಂದ ವಿವಿಧ ಧಾರ್ಮಿಕ ಕ್ಷೇತ್ರದಿಂದ ಶಬರಿಮಲೆಗೆ ಪಾದಯಾತ್ರೆಗೈಯುತ್ತಿರುವ ಇವರನ್ನು ಇಲ್ಲಿಯ ಶ್ರೀ ವರದಾ ಚೌಡೇಶ್ವರಿ ಅಯ್ಯಪ್ಪ ಸನ್ನಿಧಿಯಲ್ಲಿ ಗುರುಸ್ವಾಮಿಗಳಾದ ಪರಶುರಾಮ ಜೋಗಿ ಹಾಗೂ ಶಿವರಾಜ್ ಆಚಾರ್ಯ ಗೌರವಿಸಿ ಬಿಳ್ಕೋಟ್ಟರು.
ಈ ಸಂದರ್ಭದಲ್ಲಿ ಗುರುನಾಥ ಮೇಸ್ತ್ರಿ, ಗಣಪತಿ ಮಡಿವಾಳ ಸೇರಿದಂತೆ ಅಯ್ಯಪ್ಪ ಸನ್ನಿಧಿಯ ಸ್ವಾಮಿಗಳು, ಗ್ರಾಮಸ್ಥರು ಇದ್ದರು.


