Saturday, July 25, 2026
Homeಜಿಲ್ಲೆಬಂಟ್ವಾಳ : ಪದವೀ ಪಡೆದರೂ ಉದ್ಯೋಗವಿಲ್ಲ,ಖಿನ್ನತೆಗೆ ಒಳಗಾಗಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ,ಸ್ಥಳೀಯರಿಂದ ರಕ್ಷಣೆ.

ಬಂಟ್ವಾಳ : ಪದವೀ ಪಡೆದರೂ ಉದ್ಯೋಗವಿಲ್ಲ,ಖಿನ್ನತೆಗೆ ಒಳಗಾಗಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ,ಸ್ಥಳೀಯರಿಂದ ರಕ್ಷಣೆ.

ಬಂಟ್ವಾಳ: ಪಾಣೆಮಂಗಳೂರಿನ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಲು ಯತ್ನಿಸಿದ ನಿರುದ್ಯೋಗಿ ಸ್ನಾತಕೋತ್ತರ ಪದವೀಧರನನ್ನು ಸ್ಥಳೀಯ ಯುವಕರ ತಂಡ ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪುತ್ತೂರು ನಿವಾಸಿ ಆನಂದ ಎಂಬವರ ಪುತ್ರ ನಿಶ್ಚಿತ್ (25) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಎಂಎಸ್‌ಡಬ್ಲ್ಯೂ ಮಾಡಿರುವ ಇವರು ನಿರುದ್ಯೋಗಿಯಾಗಿದ್ದಾರೆ. ಸೂಕ್ತ ಕೆಲಸ ಸಿಗದ ಕಾರಣ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

ದ್ವಿಚಕ್ರ ವಾಹನವನ್ನು ಸೇತುವೆಯಾ ಬದಿಯಲ್ಲಿಟ್ಟು ನದಿಗೆ ಹಾರಲು ಸಿದ್ಧತೆ ನಡೆಸುತ್ತಿದ್ದ ವೇಳೆ ಸ್ಥಳೀಯ ಯುವಕರ ಗೂಡಿನ ಬಳಿಯ ತಂಡ ಜಿಗಿಯದಂತೆ ತಡೆದು ನಿಲ್ಲಿಸಿದ್ದಾರೆ.ನಂತರ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular