ಮಂಗಳೂರು ; ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಒಳಹರಿವು ಗಣನೀಯವಾಗಿ ತಗ್ಗಿದೆ. ಏಪ್ರಿಲ್ ಅಂತ್ಯದೊಳಗೆ ಮಳೆ ಬಾರದಿದ್ದರೆ ನಗರದಲ್ಲಿ ನೀರಿನ ತೀವ್ರ ಹಾಹಾಕಾರ ಉಂಟಾಗಲಿದೆ. ಅಣೆಕಟ್ಟಿನಲ್ಲಿ ಪ್ರಸ್ತುತ ಸಂಗ್ರಹವಾಗಿರುವ ನೀರು ಸುಮಾರು 50 ಕ್ಕೆ ಸಾಕಾಗುತ್ತದೆ.
ತುಂಬೆ ವೆಂಟೆಡ್ ಡ್ಯಾಂನಲ್ಲಿ ಕಳೆದೆರಡು ದಿನಗಳ ಹಿಂದೆ ನೀರಿನ ಮಟ್ಟ 5.85 ಮೀಟರ್ ಇತ್ತು. ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಮತ್ತು ನಗರದ ಸಾರ್ವಜನಿಕರು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ನಗರವು 2019 ರಲ್ಲಿ ಅನುಭವಿಸಿದ ತೀವ್ರ ನೀರಿನ ಕೊರತೆಯನ್ನು ಎದುರಿಸಬೇಕಾಗುತ್ತದೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ನೀರಿನ ಮಟ್ಟ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಮಾರ್ಚ್ 3, 2020 ರಂದು, ಅಣೆಕಟ್ಟಿನ ನೀರಿನ ಮಟ್ಟವು ಆರು ಮೀಟರ್ ಆಗಿತ್ತು. ಆದರೆ, ಈ ವರ್ಷ ಅದು ಕೇವಲ 5.85 ಮೀಟರ್ ಆಗಿದೆ. 2019 ಕ್ಕೆ ಹೋಲಿಸಿದರೆ, ನೀರಿನ ಬೇಡಿಕೆಯು 12% ರಷ್ಟು ಹೆಚ್ಚಾಗಿದೆ. ಹೀಗಾಗಿ ಶೀಘ್ರವೇ ನಗರದಲ್ಲಿ ನೀರಿನ ಅಭಾವ ತಲೆದೋರುವ ನಿರೀಕ್ಷೆ ಇದೆ ಎನ್ನುತ್ತಾರೆ ಅಧಿಕಾರಿಗಳು.
ತಕ್ಷಣದ ಕ್ರಮವಾಗಿ ಎಂಸಿಸಿ ಹೊಸ ಕೈಗಾರಿಕೆಗಳಿಗೆ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗೆ ನೀರು ಪೂರೈಕೆ ಸ್ಥಗಿತಗೊಳಿಸಿದೆ. ಪ್ರಸ್ತುತ ನಡೆಯುತ್ತಿರುವ ಕೈಗಾರಿಕೆಗಳಿಗೆ ಪಡಿತರ ನೀರು ನೀಡುವಂತೆ ಸೂಚನೆ ನೀಡಲಾಗಿದೆ.
AMR ನಲ್ಲಿ, 18.9 ಮೀಟರ್ (ಸಮುದ್ರ ಮಟ್ಟಕ್ಕಿಂತ) ನೀರಿನ ಮಟ್ಟವಿದೆ. ಈ ಪೈಕಿ ನಗರಕ್ಕೆ 14.5 ಮೀಟರ್ ಬಳಸಬಹುದಾಗಿದೆ. ತುಂಬೆ ವೆಂಟೆಡ್ ಅಣೆಕಟ್ಟಿನಲ್ಲಿ ನೀರು ಅಪಾಯಕಾರಿ ಮಟ್ಟಕ್ಕೆ ಇಳಿದಾಗ ಮಾತ್ರ ಎಎಂಆರ್ ಅಣೆಕಟ್ಟಿನ ನೀರನ್ನು ಬಳಸಲಾಗುವುದು.
ನೀರಿನ ಒಳಹರಿವು ಸ್ಥಗಿತಗೊಂಡಿರುವುದರಿಂದ ಮಳೆ ಬಾರದಿದ್ದರೆ ಮಾರ್ಚ್ ಅಂತ್ಯದೊಳಗೆ ನಗರದಲ್ಲಿ ನೀರಿನ ಪಡಿತರ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಉದ್ಯಾನ, ಕಟ್ಟಡ ಕಾಮಗಾರಿ, ವಾಹನಗಳ ಸ್ವಚ್ಛತೆಗೆ ನೀರು ಬಳಸುವುದನ್ನು ಕಡಿಮೆ ಮಾಡಬೇಕು. ಗೃಹ ಬಳಕೆಗೆ ಕೂಡ ಸೀಮಿತ ಪ್ರಮಾಣದಲ್ಲಿ ಮಾತ್ರ ಬಳಸಬೇಕಾಗುತ್ತದೆ ಎಂದು ಮೇಯರ್ ಜಯಾನಂದ ಅಂಚನ್ ಹೇಳಿದ್ದಾರೆ.