ಮಂಗಳೂರು : ಜೆಪ್ಪಿನ ಮೊಗರಿನ ಬಳಿ ಲಾರಿ ಹಾಗೂ ಸ್ಕೂಟರ್ ನ ನಡುವೆ ಸಂಭವಿಸಿದ ಅಪಘಾತದಲ್ಲಿ ಉಳ್ಳಾಲ ಸುಭಾಸ್ ನಗರ ನಿವಾಸಿ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಉಳ್ಳಾಲ ನಿವಾಸಿ ಇಬ್ರಾಹಿಂ (75) ಎಂದು ಗುರುತಿಸಲಾಗಿದೆ.
ಮೃತರು ಮಂಗಳಾದೇವಿ ಯಿಂದ ಉಳ್ಳಾಲ ಕಡೆಗೆ ತನ್ನ ಸ್ಕೂಟರಲ್ಲಿ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

