ಬೆಳಗಾವಿ : ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಗಾಂಜಾಗಾಗಿ ಗಲಾಟೆ ನಡೆದ ಘಟನೆ ನಡೆದಿದೆ. ಹಿಂಡಲಗಾ ಜೈಲಿಗೆ ಹೊರಗಿನಿಂದ ರಾಜಾರೋಷವಾಗಿ ಗಾಂಜಾ ಪ್ಯಾಕೆಟ್ ಹೋಗ್ತಿದ್ದು ಇದೀಗ ಗಾಂಜಾ ಸಲುವಾಗಿ ಸಹಾಯಕ ಜೈಲರ್ ಜಿ.ಆರ್ ಕಾಂಬಳೆ ಮೇಲೆ ಹಲ್ಲೆ ನಡೆದಿದೆ.
ಡಿ.11ರಂದು ಸಂಜೆ ವೇಳೆ ಜೈಲಿನಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಜೈಲಿನಲ್ಲಿರುವ ಗಾಂಜಾ ಕಿಂಗ್ ಪಿನ್ ವಿಚಾರಣಾಧೀನ ಕೈದಿ ಶಾಹೀದ್ ಖುರೇಶಿಯಿಂದ ಮಾರಣಾಂತಿಕ ಹಲ್ಲೆ ನಡೆದಿತ್ತು ಅಧಿವೇಶನ ಹಿನ್ನೆಲೆ ಪ್ರಕರಣ ಮುಚ್ಚಿ ಹಾಕಲು ಜೈಲು ಅಧಿಕಾರಿಗಳು ಯತ್ನಿಸಿದ್ದರು
ತೀವ್ರವಾಗಿ ಗಾಯಗೊಂಡ ಜೈಲರ್ ಜಿ.ಆರ್ ಕಾಂಬಳೆಗೆ ಚಿಕಿತ್ಸೆ ನೀಡಿದ ಹಿಂಡಲಗಾ ಜೈಲು ವೈದ್ಯರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಿಎನ್ಎಸ್ ಕಾಯ್ದೆಯಡಿ 132, 115(2), 352 ಮತ್ತು ಎನ್ಡಿಪಿಎಸ್ ಕಾಯ್ದೆ 42 ಅಡಿಯಲ್ಲಿ ಕೇಸ್ ದಾಖಲಾಗಿದೆ.
ಜೈಲಿನ ಸರ್ಕಲ್ 2ನ ಬ್ಯಾರಕ್ ಸಂಖ್ಯೆ 8ರ ಹಿಂಬಾಗದ ಗೋಡೆ ಬಳಿ ಈ ಘಟನೆ ನಡೆದಿದ್ದು ಹಲ್ಲೆ ಮಾಡಿದ ಕೈದಿ ಶಾಹೀದ್ ಖುರೇಶಿ ವಿರುದ್ಧ ದೂರು ಜೈಲಿನ ಸರ್ಕಲ್ 2ನ ಬ್ಯಾರಕ್ ಸಂಖ್ಯೆ 8ರ ಹಿಂಬಾಗದ ಗೋಡೆ ಬಳಿ ಘಟನೆ. ದಾಖಲಿಸಿದ್ದಾರೆ.
ಮುಖ್ಯ ಅಧೀಕ್ಷಕ ಕೃಷ್ಣಮೂರ್ತಿ ಸಹಾಯಕ ಜೈಲರ್ ರೌಂಡ್ಸ್ ಹೋಗುವ ವೇಳೆ ಶಾಹಿದ್ ಖುರೇಶಿ ಕೈಯಲ್ಲಿ ಸಿಕ್ಕಿದ್ದು ಪ್ಲಾಸ್ಟಿಕ್ ಸುತ್ತಿದ್ದ ಪ್ಯಾಕೆಟ್ ನ್ನು ಕಿತ್ತುಕೊಂಡು ಪರಿಶೀಲನೆ ನಡೆಸಲು ಮುಂದಾದಾಗ ಕೈದಿಯಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಕೈದಿ ಹಲ್ಲೆ ಮಾಡಿ ಗಾಂಜಾ ಪ್ಯಾಕೆಟನ್ನು ಜೈಲಿನಿಂದ ಹೊರ ಎಸೆದಿದ್ದು ಹೊರಗಡೆಯಿಂದ ಕೈದಿಗಳಿಗೆ ರಾಜಾರೋಷವಾಗಿ ಗಾಂಜಾ ಬರ್ತಿದ್ರು ತಡೆಯುವಲ್ಲಿ ಅಧಿಕಾರಿಗಳು ವಿಫಲವಾಗಿದ್ದರೆಂದು ತಿಳಿದುಬಂದಿದೆ .
ಈ ಕುರಿತು ಗ್ರಾಮೀಣ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.