Thursday, March 27, 2025
Flats for sale
Homeರಾಜ್ಯಚಿಕ್ಕ ಬಳ್ಳಾಪುರ : ಜೇನುನೊಣ ದಾಳಿ - 33 ಮಕ್ಕಳು, 5 ಶಿಕ್ಷಕರಿಗೆ ಗಾಯ.

ಚಿಕ್ಕ ಬಳ್ಳಾಪುರ : ಜೇನುನೊಣ ದಾಳಿ – 33 ಮಕ್ಕಳು, 5 ಶಿಕ್ಷಕರಿಗೆ ಗಾಯ.

ಚಿಕ್ಕಬಳ್ಳಾಪುರ ; ತಾಲ್ಲೂಕಿನ ಚಾಪುರ ಗ್ರಾಮದ ತಪತೇಶ್ವರ ಬೆಟ್ಟಕ್ಕೆ ಸೋಮವಾರ ಟ್ರೆಕ್ಕಿಂಗ್‌ಗೆ ತೆರಳಿದ್ದ 33 ವಿದ್ಯಾರ್ಥಿಗಳು ಹಾಗೂ ಐವರು ಶಿಕ್ಷಕರು ಜೇನುನೊಣಗಳ ದಾಳಿಯಿಂದ ಗಾಯಗೊಂಡಿದ್ದಾರೆ.
ಶ್ರೀನಿವಾಸಪುರ ತಾಲ್ಲೂಕಿನ ವೇಣೂರು ಶಾಲೆಯ 80 ಮಕ್ಕಳ ಗುಂಪಿನ ಭಾಗವಾಗಿದ್ದ ಅವರು ತಮ್ಮ ಶಿಕ್ಷಕರೊಂದಿಗೆ ಚಾರಣಕ್ಕೆ ಬಂದಿದ್ದರು. ಗಾಯಗೊಂಡವರೆಲ್ಲರೂ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.

ಬೇಸಿಗೆಯ ಸೆಖೆಯಿಂದಾಗಿ ಅಥವಾ ಮಕ್ಕಳು ಜೇನುಗೂಡಿಗೆ ಕಲ್ಲು ಎಸೆಯುತ್ತಿದ್ದರಿಂದ ಜೇನುನೊಣಗಳ ದಾಳಿ ಸಂಭವಿಸಿರಬಹುದು ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular