Saturday, July 25, 2026
Homeದೇಶಉಡುಪಿ ; ಅಣ್ಣಾಮಲೈ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ಕಂತೆ ಕಂತೆ ಹಣ ರಾಜ್ಯಕ್ಕೆ ಬಂದಿದೆ : ವಿನಯ್...

ಉಡುಪಿ ; ಅಣ್ಣಾಮಲೈ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ಕಂತೆ ಕಂತೆ ಹಣ ರಾಜ್ಯಕ್ಕೆ ಬಂದಿದೆ : ವಿನಯ್ ಕುಮಾರ್ ಸೊರಕೆ.

ಉಡುಪಿ ; ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಉಡುಪಿಗೆ ಬಂದಿಳಿದ ಹೆಲಿಕಾಪ್ಟರ್‌ನಲ್ಲಿ ಭಾರೀ ಮೊತ್ತದ ಹಣದ ಬ್ಯಾಗ್ ಬಂದಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ ಸೋಮವಾರ ಆರೋಪಿಸಿದ್ದಾರೆ.

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೊರಕೆ ಮಾತನಾಡಿ, ಈ ಕುರಿತು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು.

ಉಡುಪಿ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ನಾಮಪತ್ರ ಸಲ್ಲಿಕೆಗೂ ಮುನ್ನ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಯಿಂದ ಬಿಜೆಪಿ ಸುಳ್ಳು ರಾಜಕೀಯ ಪ್ರಚಾರದಿಂದಲೇ ಗೆಲ್ಲಬಹುದಾಗಿದ್ದು, ಈ ಬಾರಿ ಅದು ಫಲಕಾರಿಯಾಗುವುದಿಲ್ಲ ಎಂದು ಸೊರಕೆ ಹೇಳಿದರು. ಈ ಸಂದರ್ಭದಲ್ಲಿ ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾಂಚನ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular