Friday, March 13, 2026
Flats for sale
Homeವಿದೇಶಮುಂಬೈ : ಆರ್ಥಿಕ ಬಿಕ್ಕಟಿನಿಂದ ದಿವಾಳಿ ಎಂದು ಘೋಷಿಸಿದ ಮಾಲ್ಡೀವ್ಸ್: ವರದಿ

ಮುಂಬೈ : ಆರ್ಥಿಕ ಬಿಕ್ಕಟಿನಿಂದ ದಿವಾಳಿ ಎಂದು ಘೋಷಿಸಿದ ಮಾಲ್ಡೀವ್ಸ್: ವರದಿ

ಮುಂಬೈ : ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ‘ಇಂಡಿಯಾ ಔಟ್’ ಅಭಿಯಾನದಿಂದ ಉಲ್ಬಣಗೊಂಡ ವಿವಾದವು ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು,ಮಾಲ್ಡೀವ್ಸ್ ದಿವಾಳಿ ಎಂದು ಘೋಷಿಸಿರುವುದಾಗಿ ಸುದ್ದಿಯಾಗಿದೆ. ಮಾಲ್ಡೀವ್ಸ್ ನಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು, ಆರ್ಥಿಕ ಕುಸಿತವನ್ನು ತಗ್ಗಿಸುವ ಪ್ರಯತ್ನದಲ್ಲಿ, ಮಾಲ್ಡೀವ್ಸ್ ಬೇಲ್‌ಔಟ್ ಸಾಲವನ್ನು ಕೋರಿ IMF ನತ್ತ ಮುಖ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಪ್ರಧಾನಿ ಮೋದಿಯನ್ನು ಮಾಲ್ಡೀವ್ಸ್ ನ ಸಂಸದರು ಕಾಲೆಳೆದಿದ್ದು ಇದರಿಂದ ಮಾಲ್ಡೀವ್ಸ್ ಪ್ರವಾಸ್ಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ತಿಳಿದಿದೆ.ಮುಯಿಝು ಅವರ ಭಾರತ-ವಿರೋಧಿ ನಿಲುವು, ಭಾರತೀಯ ಸೇನೆಯನ್ನು ತೆಗೆದುಹಾಕುವ ಪ್ರಯತ್ನಗಳು ಮತ್ತು ಮಂತ್ರಿಗಳ ವಿವಾದಾತ್ಮಕ ಹೇಳಿಕೆಗಳು, ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಹದಗೆಡಿಸಿದೆ. ಇದು ಭಾರತದೊಂದಿಗಿನ ಹದಗೆಟ್ಟ ಸಂಬಂಧಗಳನ್ನು ಒಳಗೊಂಡಿರುವ ಅದರ ಇತ್ತೀಚಿನ ಕ್ರಮಗಳ ಪರಿಣಾಮವಾಗಿದೆ.ಈ ಭೀಕರ ಆರ್ಥಿಕ ಪರಿಸ್ಥಿತಿಯು ಮಾಲ್ಡೀವ್ ಸರ್ಕಾರವನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಬೇಲ್‌ಔಟ್ ಸಾಲವನ್ನು ಪಡೆಯಲು ಪ್ರೇರೇಪಿಸಿದೆ, ಇದು ದ್ವೀಪ ರಾಷ್ಟ್ರವು ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ಇನ್ನಷ್ಟು ಉಲ್ಬಣಗೊಳಿಸಿದೆ.

ಭಾರತದ ಸಂದರ್ಶಕರ ಸಂಖ್ಯೆಯಲ್ಲಿ ತೀವ್ರ ಕುಸಿತವನ್ನು ಕಂಡಿದ್ದು ಕಳೆದ ವರ್ಷ ಮಾಲ್ಡೀವ್ಸ್‌ಗೆ ಪ್ರಯಾಣಿಸುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ಈಗ ಐದನೇ ಸ್ಥಾನಕ್ಕೆ ಕುಸಿದಿದೆ, ಇದರ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರಕ್ಕೂ ದೊಡ್ಡ ಹೊಡೆತ ಬಿದ್ದು ಮಾಡಿದುಣ್ಣೋ ಮಾರಾಯ ಎಂಬ ಗಾದೆ ಮಾತಿನ ತರಹ ಆಗಿದೆ ಮಾಲ್ಡೀವ್ಸ್ ನ ಪರಿಸ್ಥಿತಿ. ಭಾರತ-ವಿರೋಧಿ ನಿಲುವು, ಭಾರತೀಯ ಸೇನೆಯನ್ನು ತೆಗೆದುಹಾಕುವ ಪ್ರಯತ್ನಗಳು ಮತ್ತು ಮಂತ್ರಿಗಳ ವಿವಾದಾತ್ಮಕ ಹೇಳಿಕೆಗಳು, ರಾಜತಾಂತ್ರಿಕ ಸಂಬಂಧಗಳನ್ನು ಹದಗೆಡಿಸಿತು ಎಂದು ತಜ್ಞರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular