Sunday, March 15, 2026
Flats for sale
Homeಜಿಲ್ಲೆಮಂಗಳೂರು: ನೂರಾರು ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ.

ಮಂಗಳೂರು: ನೂರಾರು ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ.

ಮಂಗಳೂರು : ಕಾರ್ಕಳ, ಅಜೆಕಾರು, ಬಜೆಗೋಳಿ, ಕೆರ್ವಾಸೆ, ತೀರ್ಥಹಳ್ಳಿಯಲ್ಲಿ ನೂರಾರು ಹಸುಗಳನ್ನು ಕಳ್ಳತನ ಮಾಡಿ ವಾಹನಕ್ಕೆ ನಕಲಿ ನಂಬರ್‌ ಪ್ಲೇಟ್‌ ಹಾಕಿ ಪರಾರಿಯಾಗುತಿದ್ದ ಇಬ್ಬರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಮೂಡುಬಿದಿರೆಯ ಪ್ರಂತ್ಯ ಗ್ರಾಮದ ಪೇಪರ್ ಮಿಲ್ ಸಮೀಪದ ನಿವಾಸಿ ಮಹಮ್ಮದ್ ಶರೀಫ್ (23) ಹಾಗೂ ತೋಡಾರ್ ಗ್ರಾಮದ ಮದರಸ ಬಳಿ ವಾಸವಿದ್ದ ಹಸೈನಾರ್ (28) ಎಂದು ತಿಳಿದುಬಂದಿದೆ.

ಗುರುವಾರ ಬೆಳಗ್ಗೆ ಮುಚ್ಚೂರು ಕ್ರಾಸ್‌ನಲ್ಲಿ ಬಿಳಿ ಬಣ್ಣದ ಕಾರೊಂದು ಅನುಮಾನಾಸ್ಪದವಾಗಿ ಸಂಚರಿಸುತ್ತಿರುವ ಬಗ್ಗೆ ಬಜ್ಪೆ ಠಾಣೆಯ ಠಾಣಾ ನಿರೀಕ್ಷಕ ಸಂದೀಪ್ ಅವರಿಗೆ ಸುಳಿವು ಸಿಕ್ಕಿತ್ತು. ಎಡಪದವು ಗ್ರಾಮದ ಮುಚ್ಚೂರು ಕ್ರಾಸ್ ಬಳಿ ಪಿಎಸ್‌ಐ ರೇವಣಸಿದ್ದಪ್ಪ ಮತ್ತು ಸಿಬ್ಬಂದಿ ಕಾರನ್ನು ಅಡ್ಡಗಟ್ಟಿದ್ದಾರೆ. ಓರ್ವ ಆರೋಪಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಲ್ಲಿ ಒಬ್ಬನಾದ ಹಸೈನಾರ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಹಸು ಕಳ್ಳತನ ಮತ್ತು ಹಾಳೆ ಕಳ್ಳತನ ಪ್ರಕರಣಗಳು ದಾಖಲಾಗಿವೆ.

ಬಂಧಿತ ವ್ಯಕ್ತಿಗಳು ವಿಚಾರಣೆ ನಡೆಸಿದಾಗ ಯಡಪದವು ಗ್ರಾಮದ ತಿಪ್ಪಲಬೆಟ್ಟು ಎಂಬಲ್ಲಿ ದನದ ಕೊಟ್ಟಿಗೆಯಲ್ಲಿ ಎರಡು ಹಸು ಹಾಗೂ ಒಂದು ಕರುವನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಕದ್ದ ಹಸುಗಳನ್ನು ಥೋಡರ ಅನ್ಸಾರ್ ಎಂಬುವವರಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಯಿಂದ 5 ಲಕ್ಷ ಮೌಲ್ಯದ ಬಿಳಿ ಬಣ್ಣದ ಹುಂಡೈ ಕಾರನ್ನು ಜಪ್ತಿ ಮಾಡಲಾಗಿದೆ. ಕಳವಾದ ಹಸುಗಳು ಬಡಗ ಯಡಪದವು ಗ್ರಾಮದ ತಿಪ್ಪೆಬೆಟ್ಟು ನಿವಾಸಿ ಸುಜಾತಾ ಎಂಬುವರಿಗೆ ಸೇರಿದ್ದು. ಘಟನೆ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular