Saturday, March 15, 2025
Flats for sale
Homeಜಿಲ್ಲೆಬಂಟ್ವಾಳ : ವಕೀಲರ ಮೇಲೆ ದೌರ್ಜನ್ಯ - ಕರ್ತವ್ಯಲೋಪ ಆರೋಪದಡಿ ಪುಂಜಾಲಕಟ್ಟೆ ಎಸ್‌ಐ ಸುತೇಶ್‌ ವರ್ಗಾವಣೆ

ಬಂಟ್ವಾಳ : ವಕೀಲರ ಮೇಲೆ ದೌರ್ಜನ್ಯ – ಕರ್ತವ್ಯಲೋಪ ಆರೋಪದಡಿ ಪುಂಜಾಲಕಟ್ಟೆ ಎಸ್‌ಐ ಸುತೇಶ್‌ ವರ್ಗಾವಣೆ

ಬಂಟ್ವಾಳ : ಕರ್ತವ್ಯ ಲೋಪದ ಆರೋಪದ ಮೇಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆ ಎಸ್‌ಐ ಸುತೇಶ್ ಅವರನ್ನು ಸರಕಾರ ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿದೆ.

ಮಧ್ಯರಾತ್ರಿ 12 ಗಂಟೆಗೆ ವರ್ಗಾವಣೆ ಆದೇಶವನ್ನು ಕಳುಹಿಸಲಾಗಿದೆ. ಯುವ ವಕೀಲರೊಬ್ಬರ ಬಂಧನಕ್ಕೆ ಸಂಬಂಧಿಸಿದಂತೆ ಎಸ್ ಐ ಸುತೇಶ್ ವಿವಾದ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು.

ಉಪ್ಪಿನಂಗಡಿ ಪೊಲೀಸ್‌ ಎಸ್‌ಐ ನಂದಕುಮಾರ್‌ ಅವರಿಗೆ ಸದ್ಯ ಪುಂಜಾಲಕಟ್ಟೆ ಪೊಲೀಸ್‌ ಠಾಣೆಯ ಜವಾಬ್ದಾರಿಯನ್ನು ಹಸ್ತಾಂತರಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular