Friday, March 28, 2025
Flats for sale
Homeಜಿಲ್ಲೆಮಂಗಳೂರು : ಸ್ಮಾರ್ಟ್ ಸಿಟಿ ಯಾ ಅವೈಜ್ನಾನಿಕ ಕಾಮಗಾರಿ - ತೆರೆದ ಚರಂಡಿಗೆ ಬಿದ್ದ ವೃದ್ಧೆ.

ಮಂಗಳೂರು : ಸ್ಮಾರ್ಟ್ ಸಿಟಿ ಯಾ ಅವೈಜ್ನಾನಿಕ ಕಾಮಗಾರಿ – ತೆರೆದ ಚರಂಡಿಗೆ ಬಿದ್ದ ವೃದ್ಧೆ.

ಮಂಗಳೂರು : ಜ್ಯೋತಿಯ ಅಂಬೇಡ್ಕರ್ ವೃತ್ತದ ಬಳಿ ಚರಂಡಿಗೆ ಬಿದ್ದು ವೃದ್ಧೆಯೊಬ್ಬರು ಗಾಯಗೊಂಡಿರುವ ಘಟನೆ ಡಿ.19ರ ಸೋಮವಾರ ಬೆಳಗ್ಗೆ ನಡೆದಿದೆ.

ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಬಿದ್ದು ಗಾಯಗೊಂಡಿದ್ದ ವೃದ್ಧೆಯನ್ನು ರಕ್ಷಿಸಿದ್ದಾರೆ. ಜ್ಯೋತಿ ಲಕ್ಷ್ಮೀದಾಸ್ ಜ್ಯುವೆಲ್ಲರಿ ಬಳಿ ಕಳೆದ ಒಂದು ತಿಂಗಳ ಹಿಂದೆಯೇ ಕೇಬಲ್ ಹಾಕುವ ಉದ್ದೇಶದಿಂದ ಗಟಾರ ತೆರೆಯಲಾಗಿದ್ದು, ಅಧಿಕಾರಿಗಳು ಮುಚ್ಚಲು ತಲೆ ಕೆಡಿಸಿಕೊಂಡಿಲ್ಲ. ಸ್ಥಳೀಯ ಸಾರ್ವಜನಿಕರು ಮಹಿಳೆಯನ್ನು ಗಟಾರದಿಂದ ಹೊರಬರಲು ಸಹಾಯ ಮಾಡಿದರು.

ಆ ಭಾಗದ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳು ಆಳವಾಗಿ ಅಗೆದಿರುವ ಪಾದಚಾರಿ ಮಾರ್ಗದಲ್ಲಿ ಸಂಚರಿಸಲು ಪರದಾಡುವಂತಾಗಿದೆ.

ವೃದ್ಧರಿಗೆ ಸಹಾಯ ಮಾಡಿದ ಸ್ಥಳೀಯರು, “ಗಂಡ ಹೆಂಡತಿ ಜ್ಯೋತಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ 7 ಅಡಿ ಹೊಂಡದಲ್ಲಿ ವಯಸ್ಸಾದ ಮಹಿಳೆ ಬಿದ್ದಿರುವುದನ್ನು ನೋಡಿದ ಅವರು ಸುತ್ತಮುತ್ತಲಿನವರಿಗೆ ಎಚ್ಚರಿಕೆ ನೀಡಿದರು. ನಾವು ಅವಳನ್ನು ರಕ್ಷಿಸಲು ಸಾಧ್ಯವಾಯಿತು ಆದರೆ ಆಕೆಗೆ ಸ್ವಲ್ಪ ಗಾಯಗಳಾಗಿವೆ.

ಇಂದು ತೆರೆದ ಗಟಾರದಿಂದಾಗಿ ವೃದ್ಧೆಯೊಬ್ಬರು ಗಾಯಗೊಂಡಿದ್ದಾರೆ. ಅಧಿಕಾರಿಗಳ ಅಪೂರ್ಣ ಕೆಲಸದಿಂದ ಇಂತಹ ಅನೇಕ ಸಾವಿನ ಬಲೆಗಳು ರೂಪುಗೊಂಡಿವೆ, ಅಸಹಾಯಕ ಪಾದಚಾರಿಗಳನ್ನು ಅಪಾಯಕ್ಕೆ ತಳ್ಳುತ್ತಿವೆ. ಸ್ಮಾರ್ಟ್ ಸಿಟಿ ಸಮಸ್ಯೆಗಳ ಬಗ್ಗೆ ಸ್ಥಳೀಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular