Monday, March 17, 2025
Flats for sale
Homeಜಿಲ್ಲೆಪುತ್ರನ ಸಮ್ಮುಖದಲ್ಲೇ ಕಡಲುಪಾಲಾಗಿ ವ್ಯಕ್ತಿ ಸಾವು.ಸೋಮೇಶ್ವರ ಕಡಲ ಕಿನಾರೆಯಲ್ಲಿ ದಾರುಣ ಘಟನೆ.

ಪುತ್ರನ ಸಮ್ಮುಖದಲ್ಲೇ ಕಡಲುಪಾಲಾಗಿ ವ್ಯಕ್ತಿ ಸಾವು.ಸೋಮೇಶ್ವರ ಕಡಲ ಕಿನಾರೆಯಲ್ಲಿ ದಾರುಣ ಘಟನೆ.

ಉಳ್ಳಾಲ,(ಮಂಗಳೂರು)ಡಿ.11 ಪುತ್ರ,ಸಹೋದರ ಮತ್ತು ಸ್ನೇಹಿತರೊಂದಿಗೆ ಸೋಮೇಶ್ವರ ಬೀಚಲ್ಲಿ ನೀರಾಟವಾಡುತ್ತಿದ್ದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಅಂಬಿಕಾರೋಡ್ ನಿವಾಸಿ ಪ್ರಶಾಂತ್ ಬೇಕಲ್(47)ಮೃತ ವ್ಯಕ್ತಿ.ಮೃತ ಪ್ರಶಾಂತ್ ನಗರದ ಎಸ್.ಡಿ.ಎಮ್ ಕಾಲೇಜಲ್ಲಿ ಬಸ್ಸು ಚಾಲಕರಾಗಿದ್ದಾರೆ.
ಪ್ರಶಾಂತ್ ಇಂದು ಬೆಳಿಗ್ಗೆ ಪುತ್ರನಾದ ಚಿರಾಯು ಬೇಕಲ್ ,ಸಹೋದರ ವರದ್ ರಾಜ್ ಅವರ ಮಗ ವಂದನ್,ಸಂಕೋಳಿಗೆಯ ಸ್ನೇಹಿತ ಮಣಿ ಮತ್ತು ಅವರಿಬ್ಬರ ಮಕ್ಕಳೊಂದಿಗೆ ಸೋಮೇಶ್ವರ ಬೀಚ್ಗೆ ವಿಹಾರಕ್ಕೆ ತೆರಳಿದ್ದರು.

ಪ್ರಶಾಂತ್ ಅವರು ಸಮುದ್ರದಲ್ಲಿ ನೀರಾಟವಾಡುತ್ತಿದ್ದಾಗ ನೀರುಪಾಲಾಗಿದ್ದಾರೆ.ಪ್ರಶಾಂತ್ ಅವರ ಪುತ್ರ ಚಿರಾಯು ಈಜು ಪರಿಣಿತನಾಗಿದ್ದು ತಕ್ಷಣ ಹಗ್ಗದಿಂದ ತಂದೆಯನ್ನ ನೀರಿನಿಂದ ಮೇಲಕ್ಕೆತ್ತಿ ದಡಕ್ಕೆ ಹಾಕಿದ್ದು ಅದಾಗಲೇ ಪ್ರಶಾಂತ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಮೃತ ಪ್ರಶಾಂತ್ ಅವರ ಏಕೈಕ ಪುತ್ರ ಚಿರಾಯು ಇಂಜಿನಿಯರಿಂಗ್ ವ್ಯಾಸಂಗ ನಡೆಸುತ್ತಿದ್ದಾನೆ.ಮೃತರು ತಾಯಿ,ಪತ್ನಿ ,ಪುತ್ರ,ಇಬ್ಬರು ತಮ್ಮಂದಿರು,ಅಮ್ಮನನ್ನ ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular