ಮಂಗಳೂರು ; ಸಿ.ಎಂ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಬೇಟಿ ನೀಡುವ ಸಂದರ್ಭದಲ್ಲಿ ಆರು ಜನ ಮುಸುಕುದಾರಿಗಳು ನುಗ್ಗಿ ಗನ್ ತೋರಿಸಿ ದರೋಡೆ ಮಾಡಿದ ಘಟನೆ ನಡೆದಿದೆ.

ಕೋಟೆಕಾರ್ ನಲ್ಲಿ ಬ್ಯಾಂಕ್ ಕಳ್ಳತನ ನಡೆದಿದ್ದು 15 ಕೋಟಿ ಮೌಲ್ಯದ ಚಿನ್ನಾಭರಣ 5 ಲಕ್ಷ ರೂಪಾಯಿ ಹಣವನ್ನು ಗನ್ ತೋರಿಸಿ ಲೂಟಿ ಹೊಡೆದದ್ದಾರೆಂದು ಮಾಹಿತಿ ದೊರೆತಿದೆ.
ಗನ್ ಪಾಯಿಂಟ್ ನಲ್ಲಿ ದುಷ್ಕರ್ಮಿಗಳು ದರೋಡೆ ಮಾಡಿದ್ದು ಐವರು ಸದಸ್ಯರೊಂದಿಗೆ ದುಷ್ಕರ್ಮಿಗಳು ಫಿಯೆಟ್ ಕಾರಿನಲ್ಲಿ ಬಂದಿದ್ದಾರೆಂದು ತಿಳಿದಿದೆ. ದುಷ್ಕರ್ಮಿಗಳು ಸ್ಥಳದಿಂದ ಮಂಗಳೂರು ಕಡೆಗೆ ಪರಾರಿಯಾಗಿದ್ದು ಇದೀಗ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು ಅಪರಾಧ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆಯನ್ನು ಚುರುಕುಗೊಳಿಸುವಂತೆ ಮತ್ತು ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ವಿಧಿವಿಜ್ಞಾನ ತಜ್ಞರು ಹಾಗೂ ಶ್ವಾನದಳದ ನೆರವಿನೊಂದಿಗೆ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಪೊಲೀಸರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ದರೋಡೆಯ ಸಂದರ್ಭದಲ್ಲಿ, ಗ್ಯಾಂಗ್ ನೆಲ ಮಹಡಿಯಲ್ಲಿರುವ ಬೇಕರಿಯಲ್ಲಿದ್ದ ವಿದ್ಯಾರ್ಥಿಗಳ ಗುಂಪನ್ನು ಬ್ಯಾಂಕ್ನಿಂದ ದೂರವಿರುವಂತೆ ಒತ್ತಾಯಿಸಿತು. ಅವರು ತಮ್ಮ ನಡುವೆ ಕನ್ನಡದಲ್ಲಿ ಮಾತನಾಡುತ್ತಿದ್ದರು ಆದರೆ ಬ್ಯಾಂಕ್ ಸಿಬ್ಬಂದಿಯೊಂದಿಗೆ ಹಿಂದಿಯಲ್ಲಿ ಸಂವಹನ ನಡೆಸುತ್ತಿದ್ದರು ಎಂದು ಪೊಲೀಸರು ಸಂಗ್ರಹಿಸಿದ ಸಾಕ್ಷಿ ಹೇಳಿಕೆಗಳ ಪ್ರಕಾರ ತಿಳಿದಿದೆ.
ಕಾಕತಾಳೀಯವೆಂಬಂತೆ ದರೋಡೆ ನಡೆದ ಸಂದರ್ಭದಲ್ಲಿ ಬ್ಯಾಂಕ್ ನ ಸಿಸಿಟಿವಿ ವ್ಯವಸ್ಥೆ ದುರಸ್ತಿಯಲ್ಲಿತ್ತು. ವ್ಯವಸ್ಥೆ ಸರಿಪಡಿಸಲು ಬಂದಿದ್ದ ತಂತ್ರಜ್ಞನೂ ಅಲ್ಲಿಯೇ ಇದ್ದು ಬಲಿಯಾಗಿದ್ದಾನೆ. ದರೋಡೆಕೋರರು ಬಲವಂತವಾಗಿ ತಂತ್ರಜ್ಞರಿಂದ ಉಂಗುರವನ್ನು ತೆಗೆದುಕೊಂಡು ತಮ್ಮ ಅಪರಾಧವನ್ನು ನಿಖರವಾಗಿ ನಡೆಸಿದರು.
ಬಂದೂಕು ಮತ್ತು ಕತ್ತಿಗಳನ್ನು ಹಿಡಿದುಕೊಂಡು ಬ್ಯಾಂಕಿಗೆ ನುಗ್ಗಿದ ದುಷ್ಕರ್ಮಿಗಳು, ಅಲ್ಲಿ ಮೂವರು ಮಹಿಳಾ ಸಿಬ್ಬಂದಿ, ಒಬ್ಬ ಪುರುಷ ಸಿಬ್ಬಂದಿ ಮತ್ತು ಒಬ್ಬ ಸಿಸಿಟಿವಿ ತಂತ್ರಜ್ಞನನ್ನು ಗನ್ ಪಾಯಿಂಟ್ನಲ್ಲಿ ಹಿಡಿದಿದ್ದರು. ತಡೆದರೆ ಕೊಲ್ಲುವುದಾಗಿ ಬೆದರಿಸಿದ ದರೋಡೆಕೋರರು ಪರಾರಿಯಾಗುವ ಮೊದಲು ಬ್ಯಾಂಕ್ನ ಲಾಕರ್ ಅನ್ನು ಬಲವಂತವಾಗಿ ತೆರೆದು ಬೆಲೆಬಾಳುವ ವಸ್ತುಗಳನ್ನು ಖಾಲಿ ದೋಚಿ ಪರಾರಿಯಾಗಿದ್ದಾರೆ.


