ಕಲಬುರಗಿ : ತಲೆ ಮೇಲೆ ಶಾಲಾ ವಾಹನ ಹರಿದು ಸ್ಥಳದಲ್ಲಿ ಮೂರು ವರ್ಷದ ಮಗು ಸಾವನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಶಿವಪುರ ಗ್ರಾಮದಲ್ಲಿ ನಡೆದಿದೆ.
ಶಾಲಾ ವಾಹನ ಚಾಲಕನ ನಿರ್ಲಕ್ಷ್ಯಕ್ಕೆ ಬಲಿಯಾದ ಮಗುವನ್ನು ಅಫಜಲಪುರ ತಾಲೂಕಿನ ಶಿವಪುರ ಗ್ರಾಮದ ರಾಜಶೇಖರ ಎಂಬುವರ ಪುತ್ರಿ ಖುಷಿ ಬನ್ನಟ್ಟಿ (3) ಎಂದು ತಿಳಿದುಬಂದಿದೆ.
ಶಾಲಾ ವಾಹನದಲ್ಲಿ ಬಂದಿದ್ದ ಅಣ್ಣನನ್ನ ಕರೆಯಲು ತಂದೆ ಹಿಂದೆಯೇ ಓಡೋಡಿ ಮಗು.. ಬಂದಿದ್ದು ತಂದೆಗೆ ತನ್ನ ಮಗಳು ತನ್ನ ಹಿಂದೆಯೇ ಬಂದಿದ್ದುಎಂದು ತಿಳಿದಿರಲಿಲ್ಲ .
ಈ ವೇಳೆ ಚಾಲಕ ಹಿಂದಕ್ಕೆ ತಿರುಗಿಸಿಕೊಳ್ಳುವಾಗ ಶಾಲಾ ವಾಹನ ಚಕ್ರದಡಿ ಸಿಲುಕಿ ಮಗು ಮೃತಪಟ್ಟಿದೆ .ಶಾಲಾ ವಾಹನ ಚಾಲಕ ಶ್ರೀಶೈಲ್ ಬಂಧಿಸಿದ್ದು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


