ಮಂಗಳೂರು ; ಪೊಲೀಸರಿಂದ ತಪ್ಪಿಸಿ ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ನ ಖತರ್ನಾಕ್ ಚೆಡ್ಡಿ ಗ್ಯಾಂಗ್ ಮೇಲೆ ಪೋಲಿಸರು ಶೂಟ್ ಔಟ್ ಮಾಡಿದ ಘಟನೆ ಮಂಗಳೂರು ಹೊರವಲಯದ ಮುಲ್ಕಿ ಬಳಿ ನಡೆದಿದೆ.
ಮುಲ್ಕಿ ಸಮೀಪ ಮಹಜರಿಗೆ ತೆರಳಿದ ಸಂದರ್ಭದಲ್ಲಿ ಚಡ್ಡಿಗ್ಯಾಂಗ್ ಎಎಸ್ ಐ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ವೇಳೆ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆಂದು ತಿಳಿದುಬಂದಿದೆ.
ಪೋಲಿಸರು ಆರೋಪಿಗಳನ್ನು ನಿನ್ನೆ ಸಕಲೇಶಪುರದಲ್ಲಿ ಅಡ್ಡಹಾಕಿ ಬಂಧಿಸಿ ಕರೆತಂದಿದ್ದರು. ಇಬ್ಬರಿಗೆ ಕಾಲಿಗೆ ಗುಂಡು ಏಟು ತಗುಳಿದ್ದು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.


