Friday, March 13, 2026
Flats for sale
Homeಜಿಲ್ಲೆಮಂಗಳೂರು ; ಗಾಂಜಾದ ನಶೆಯಿಂದ ಲಕ್ಷಾಂತರ ಹಣದ ಜೊತೆ ಅನ್ಯಕೋಮಿನ ಯುವಕನ ಜೊತೆ ಪರಾರಿಯಾದ ಚೈತ್ರಾ...

ಮಂಗಳೂರು ; ಗಾಂಜಾದ ನಶೆಯಿಂದ ಲಕ್ಷಾಂತರ ಹಣದ ಜೊತೆ ಅನ್ಯಕೋಮಿನ ಯುವಕನ ಜೊತೆ ಪರಾರಿಯಾದ ಚೈತ್ರಾ ಹೆಬ್ಬಾರ್.

ಮಂಗಳೂರು ; ಪುತ್ತೂರಿನ ಪುರಷರಕಟ್ಟೆ ನಿವಾಸಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ,ಅನ್ಯಕೋಮಿನ ಗಾಂಜಾವ್ಯಸನಿ ಶಾರೂಕ್ ಶೇಕ್ ಜೋತೆ ಪರಾರಿಯಾಗಿರುವ ವಿಚಾರ ತಿಳಿದಿದ್ದು ಮಂಗಳೂರಿನ ಸುರತ್ಕಲ್ ನ ಎಟಿಎಂ ನಿಂದ ಹಣ ತೆಗೆದಿರುವ ವಿಚಾರ ಬೆಳಕಿಗೆಬಂದಿದೆ.ಚೈತ್ರಲಾ ಅಕೌಂಟ್ ನಿಂದ ಲಕ್ಷಾಂತರ ಹಣವಿದ್ದು ಅಕೌಂಟನ್ನು ಬ್ಲಾಕ್ ಮಾಡಲಾಗಿದೆ ಎಂದು ಮಾಹಿತಿ ತಿಳಿಯಲಾಗಿದೆ.

ಬಂಟ್ವಾಳದ ನೇರಳೆಕಟ್ಟೆ ನಿವಾಸಿ ಯಾಗಿರುವ ಶಾರೂಕ್ ಶೇಕ್ ಪುತ್ತೂರಿನ ಕೂರ್ನಡ್ಕದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ ಐಟಿಐ ವಿಧ್ಯಾಭ್ಯಾಸ ಮಾಡಿರುವ ಶಾರೂಕ್ ಶೇಖ್ ಸೌದಿ ಅರೇಬಿಯಾ,ದುಬೈ ಹಾಗೂ ಕತಾರ್ ನಲ್ಲಿ ಕೆಲಸದಲ್ಲಿದ್ದು ಹಲವು ಆರೋಪದಡಿ ಒಂದು ವರ್ಷಗಳ ಕಾಲ ಜೈಲಿನಲ್ಲಿದ್ದ.

ಚೈತ್ರಾಲಿಗೆ ಗಾಂಜಾದ ರುಚಿತೋರಿಸಿದ್ದ ಶಾರುಕ್ ಶೆಖ್ ಮಂಗಳೂರಿನ ಪ್ರತಿಷ್ಠಿತ ಫ್ಲಾಟ್ನನಲ್ಲಿ ನೆಲೆಸಿದ್ದು ,ಗಾಂಜಾ ,ಎಂಡಿಎಂ ನಶೆಯಿಂದ ಸುಖದ ಸುಪ್ಪತ್ತಿಗೆಯಲ್ಲಿ ಶಾರೂಖ್ ಜೋತೆ ಮಜಾ ಉಡಾಯಿಸುತ್ತಿದ್ದಳು ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೋಲಿಸರು ಜೋಡಿಗಳ ಚಲನವಳನಗಳ ಬಗ್ಗೆ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular