Saturday, July 25, 2026
Homeಜಿಲ್ಲೆಸುಳ್ಯ : ಬೆಳ್ಳಾರೆ ಮಹಮ್ಮದ್ ಮಸೂದ್ ಕೊಲೆ ಪ್ರಕರಣ.ಎಲ್ಲಾ ಆರೋಪಿಗಳಿಗೂ ಜಾಮೀನು ಮಂಜೂರು.

ಸುಳ್ಯ : ಬೆಳ್ಳಾರೆ ಮಹಮ್ಮದ್ ಮಸೂದ್ ಕೊಲೆ ಪ್ರಕರಣ.ಎಲ್ಲಾ ಆರೋಪಿಗಳಿಗೂ ಜಾಮೀನು ಮಂಜೂರು.

ಸುಳ್ಯ : ತಾಲೂಕಿನ ಬೆಳ್ಳಾರೆ ಸಮೀಪದ ಕಳೆಂಜ ಮಹಮ್ಮದ್ ಮಸೂದ್ ಕೊಲೆ ಪ್ರಕರಣ ಬಾಕಿ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ನಿಂದ ಜಾಮಿನು ಮಂಜೂರು ಮಾಡಲಾಗಿದೆ.

ಕಳೆದ ವರ್ಷ ಬೆಳ್ಳಾರೆ ಸಮೀಪದ ಕಳೆಂಜ ಎಂಬಲ್ಲಿ ನಡೆದಿದ್ದ ಮಸೂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅಭಿಲಾಷ್ ಮತ್ತು ಸುನಿಲ್ ಇವರುಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು, ಅರ್ಜಿಯನ್ನು ಪರಿಗಣಿಸಿದ ಕರ್ನಾಟಕದ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಜಸ್ಟಿಸ್ ವಿಶ್ವಜೀತ್ ಎಸ್ ಶೆಟ್ಟಿ ಇಂದು ಜಾಮೀನು ಮಂಜೂರು ಮಾಡಿದರು‌. ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಅರುಣ್ ಶಾಮ್ ರವರು ವಾದ ಮಂಡಿಸಿದ್ದರು. ವಕೀಲರಾದ ಸುಯೋಗ್ ಹೇರಳೆ ಮತ್ತು ನಿಶಾಂತ್ ಕುಶಾಲಪ್ಪ ವಕಾಲತ್ತು ವಹಿದ್ದರು. ಒಟ್ಟು ಎಂಟು ಮಂದಿ ಆರೋಪಿಗಳ ಪೈಕಿ ಈ ಮೊದಲೇ ಆರು ಜನ ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು.ಇದೀಗ ಉಳಿದ ಇಬ್ಬರಿಗೂ ಜಾಮೀನು ಮಂಜೂರಾಗುವ ಮೂಲಕ ಎಲ್ಲಾ ಎಂಟು ಮಂದಿ ಆರೋಪಿಗಳಿಗೂ ಜಾಮೀನು ಲಭ್ಯವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular