Saturday, July 25, 2026
Homeಜಿಲ್ಲೆಮಂಗಳೂರು ; ಹೆಚ್ಚಿದ ತಾಪಮಾನಕ್ಕೆ ತಂಪಾಗಿಸಲು ಸುರಿದ ಮೊದಲ ಮುಂಗಾರು ಮಳೆ.

ಮಂಗಳೂರು ; ಹೆಚ್ಚಿದ ತಾಪಮಾನಕ್ಕೆ ತಂಪಾಗಿಸಲು ಸುರಿದ ಮೊದಲ ಮುಂಗಾರು ಮಳೆ.

ಮಂಗಳೂರು ; ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಬೆಳಗ್ಗೆ ಗುಡುಗು ಸಹಿತ ಮಳೆಯಾಗಿದೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು.

ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಉಂಟಾಗಿರುವ ಕಾರಣ ಸಮುದ್ರದ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ, ಜೂನ್ 12 ರವರೆಗೆ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ. ಇದಲ್ಲದೆ, ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರವು 3.5 – 4.1 ಮೀಟರ್ ವ್ಯಾಪ್ತಿಯಲ್ಲಿ ಅಲೆಗಳು ಎದ್ದಿದೆ ಎಂದು ಎಚ್ಚರಿಸಿದೆ. ಜೂನ್ 11 ರವರೆಗೆ ಕರಾವಳಿಯಲ್ಲಿ ಅಪ್ಪಳಿಸಲಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ದಕ್ಷಿಣ ಕನ್ನಡ, ಕೊಡಗು, ಕೋಲಾರ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಭಾರೀ ಗಾಳಿಯೊಂದಿಗೆ ಮಳೆಯಾಗುವ ಮುನ್ಸೂಚನೆ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular