Sunday, December 14, 2025
Flats for sale
Homeಜಿಲ್ಲೆಮಂಗಳೂರು : ಮಾರ್ಚ್ 3 ರಿಂದ 14 ರ ವರೆಗೆ ಅಡ್ಯಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ...

ಮಂಗಳೂರು : ಮಾರ್ಚ್ 3 ರಿಂದ 14 ರ ವರೆಗೆ ಅಡ್ಯಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪುನರ್ ನಿರ್ಮಾಣ ,ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವ…!

ಮಂಗಳೂರು ; ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಅಡ್ಯಾರು ಗ್ರಾಮದ ಗ್ರಾಮ ದೇವರಾದ ಮಹಾಲಿಂಗೇಶ್ವರ ಕ್ಷೇತ್ರವು ಯೋಗಿಯೋರ್ವರ ಪ್ರೇರಣೆಯಿಂದ ಅತ್ತಾವರ ಕೀರ್ತಿಶೇಷ ಸಂಕಪ್ಪ ಪೂಂಜರಿಂದ 400 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಕಾರಣೀಕದ ಶಿವಕ್ಷೇತ್ರ. ಊರ ಪರವೂರ ಭಕ್ತರ ಶ್ರದ್ಧಾಪೂರ್ವಕ ಸಹಕಾರದೊಂದಿಗೆ ಬೈದ್ಯಾವುಗುತ್ತು ಕುಟುಂಬಿಕರ ವಂಶ ಪಾರಂಪರಿಕ ಆಡಳಿತದೊಂದಿಗೆ ಭಕ್ತರನ್ನು ಅನುಗ್ರಹಿಸುವ ಈ ಪುಣ್ಯ ಕ್ಷೇತ್ರದ ಪುನರ್ ನಿರ್ಮಾಣ ಕಾರ್ಯ ಬಹಳ ಸುಂದರವಾಗಿ ಮೂಡಿ ಬಂದಿದ್ದು, 01-03-2025 ರಿಂದ 14 -03 -2025ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರ ಮಹೋತ್ಸವ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಂತ್ರಿವರೇಣ್ಯರಾದ ವಾಮಂಜೂರು ಶ್ರೀ ಅನಂತ ಉಪಾಧ್ಯಾಯ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಪುನ‌ರ್ ಪ್ರತಿಷ್ಯ, ಬ್ರಹ್ಮಕಲಶೋತ್ಸವ, ಜಾತ್ರಾಮಹೋತ್ಸವದೊಂದಿಗೆ ಲೋಕಾರ್ಪಣೆಗೊಳ್ಳಲಿದೆ. 01-03 -2025ರಂದು ಸಂಜೆ ಗಂಟೆ 3.30ಕ್ಕೆ ಶರವು ಮಹಾಗಣಪತಿ ದೇವಸ್ಥಾನದ ಶಿಲೆ ಶಿಲೆ ಆಡಳಿತ ಮೊತ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿಗಳಿಂದ ಉದ್ಘಾಟಿಸಲ್ಪಡುವ ಹಸಿರು ಹೊರಕಾಣಿಕೆ ಶೋಭಾಯಾತ್ರೆಯು ಅಡ್ಯಾರು ಸೋಮನಾಥ ಕಟ್ಟೆಯಿಂದ ಹೊರಟು ರಾಜಮಾರ್ಗದಲ್ಲಿ ಸಾಗಿ ಶ್ರೀ ಕ್ಷೇತ್ರವನ್ನು ತಲುಪಲಿದೆ. 06-03 – 2025ರಂದು ಬೆಳಿಗ್ಗೆ ಗಂಟೆ 11. 05ರಿಂದ ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ,ಮಹಾಕಾಳಿ ಹಾಗೂ ಪರಿವಾರ ದೇವರುಗಳ ಪ್ರತಿಷ್ಠೆ ಆಗಿ 09 – 03 – 2025ರಂದು ಬೆಳಿಗ್ಗೆ ಗಂಟೆ 11.05ಕ್ಕೆ ಬ್ರಹ್ಮಕಲಶಾಭಿಶೇಕ ನೆರವೇರಲಿದೆ. ಇದೇ ದಿನ ಸಂಜೆ ಧ್ವಜಾರೋಹಣ ಆಗಿ 14-03-2025ರ ತನಕ ಜಾತ್ರೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಸಭೆಗಳಲ್ಲಿ ವಿವಿಧ ಧಾರ್ಮಿಕ ಕ್ಷೇತ್ರಗಳ ಮಠಾಧೀಶರು ಆಶೀರ್ವಚನ ನೀಡಲಿದ್ದು ಬೇರೆ ಬೇರೆ ಕ್ಷೇತ್ರಗಳ ಸಾಧಕರು,ರಾಜಕೀಯ ನಾಯಕರು, ಕೊಡುಗೈ ದಾನಿಗಳು ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ. ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲಾ ಮಾಧ್ಯಮ ಬಂಧುಗಳನ್ನು ಈ ಪುಣ್ಯ ಕಾರ್ಯಕ್ರಮಗಳಿಗೆ ಗೌರವಪೂರ್ವಕವಾಗಿ ಆಮಂತ್ರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ .ಶ್ರೀ ಅನಂತ ಉಪಾಧ್ಯಾಯರು – ಕ್ಷೇತ್ರದ ತಂತ್ರಿಗಳು, ಶ್ರೀ ದಿವಾಕರ ದಾಸ್ ಮಲ್ಲಿ, ದೇವಸ್ಥಾನದ ಟ್ರಸ್ಟಿನ ಆಡಳಿತ ಟ್ರಸ್ಟಿ,ಶ್ರೀ ಎನ್. ರವಿರಾಜ್ ಶೆಟ್ಟಿ ನಿಟ್ಟೆಗುತ್ತು ಪುನ‌ರ್ ನಿರ್ಮಾಣ ಸಮಿತಿಯ ಅಧ್ಯಕ್ಷರು, ಶ್ರೀ ದಿವಾಕರ ನಾಯ್ ಅಡ್ಯಾರು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರು,ಶ್ರೀ ಪ್ರಮೋದ್ ಕುಮಾರ್ ಶೆಟ್ಟಿ ಭಂಡಾರಿಂಜ, ಪುನರ್ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ, ಶ್ರೀ ದೇವಿಪ್ರಸಾದ್ ಸಾಮಾನಿ ಅಡ್ಯಾರುಗುತ್ತು ನ್ಯಾಯವಾದಿಗಳು ಪುನರ್ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧ್ಯಕ್ಷರು, ಶ್ರೀ ಪುರುಷೋತ್ತಮ ಕೆ ಭಂಡಾರಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular