Sunday, July 26, 2026
Homeಜಿಲ್ಲೆಬೆಳ್ತಂಗಡಿ: ಹುಟ್ಟುಹಬ್ಬದ ದಿನದಂದೆ ಬಸ್-ಬೈಕ್ ಡಿಕ್ಕಿ ವಿದ್ಯಾರ್ಥಿ ಸಾವು.

ಬೆಳ್ತಂಗಡಿ: ಹುಟ್ಟುಹಬ್ಬದ ದಿನದಂದೆ ಬಸ್-ಬೈಕ್ ಡಿಕ್ಕಿ ವಿದ್ಯಾರ್ಥಿ ಸಾವು.

ಬೆಳ್ತಂಗಡಿ : ಗರಡಾಡಿ ಗ್ರಾಮದ ಮೊಗೇರಡ್ಕ ಕ್ರಾಸ್ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಹೃದಯ ವಿದ್ರಾವಕ ಘಟನೆಯಲ್ಲಿ ವಿದ್ಯಾರ್ಥಿ, ಪೆರಿಯಡ್ಕ ಕಾಸರಗೋಡು ಮೂಲದ ವಿದ್ಯಾರ್ಥಿ ದೀಕ್ಷಿತ್ (19) ಬುಧವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೀಕ್ಷಿತ್ ಅವರ ಜನ್ಮದಿನವಾಗಿತ್ತು ಮತ್ತು ಅವರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಹಿಂತಿರುಗುತ್ತಿದ್ದರು.

ದೀಕ್ಷಿತ್ ಹುಟ್ಟುಹಬ್ಬದ ದಿನವಾದ ಕಾರಣ ಬೆಳಗ್ಗೆಯೇ ವೇಣೂರು ದೇವಸ್ಥಾನಕ್ಕೆ ತೆರಳಿದ್ದರು. ಟ್ರಕ್ ಅನ್ನು ಹಿಂದಿಕ್ಕುವ ಭರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ದೀಕ್ಷಿತ್ ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.

ಬೆಳ್ತಂಗಡಿ ಪೊಲೀಸರು ಕೆಎಸ್‌ಆರ್‌ಟಿಸಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೀಕ್ಷಿತ್ ಒಡೀಲ್‌ನಲ್ಲಿರುವ ಅಜ್ಜನ ಮನೆಯಲ್ಲಿ ವಾಸವಾಗಿದ್ದು, ವೇಣೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಎರಡನೇ ವರ್ಷದ ಐಟಿಐ ವ್ಯಾಸಂಗ ಮಾಡುತ್ತಿದ್ದ. ಕಬಡ್ಡಿ ಮತ್ತು ಕಂಬಳ ಕ್ರೀಡೆಗಳಲ್ಲಿ ಪರಿಣಿತಿಯನ್ನು ಹೊಂದಿದ್ದ ಇವರು ಉತ್ತಮ ಕ್ರೀಡಾಪಟುವಾಗಿದ್ದರು.

ದೀಕ್ಷಿತ್ ಪೋಷಕರು ಮತ್ತು ಸಹೋದರನನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular