Monday, March 24, 2025
Flats for sale
Homeರಾಜ್ಯಪಯ್ಯನ್ನೂರು : ಮಾಡಾಯಿ ಶ್ರೀ "ತಿರುವರ್ ಕಾಡು ಭಗವತಿ" ದೇವಸ್ಥಾನಕ್ಕೆ ಭೇಟಿ ನೀಡಿ ಶತ್ರು ಸಂಹಾರ...

ಪಯ್ಯನ್ನೂರು : ಮಾಡಾಯಿ ಶ್ರೀ “ತಿರುವರ್ ಕಾಡು ಭಗವತಿ” ದೇವಸ್ಥಾನಕ್ಕೆ ಭೇಟಿ ನೀಡಿ ಶತ್ರು ಸಂಹಾರ ಪೂಜೆ ಸಲ್ಲಿಸಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್..!

ಪಯ್ಯನ್ನೂರು : ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಚಿತ್ರೀಕರಣದಿಂದ ವಿರಾಮ ತೆಗೆದುಕೊಂಡು ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರಿನಲ್ಲಿರುವ ಮಾಡಾಯಿ ಕಾವು “ತಿರುವರ್ ಕಾಡು ಭಗವತಿ” ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ವಿಶೇಷ ಪೂಜೆ ಶತ್ರು ಸಂಹಾರ ಪೂಜೆ ಸಲ್ಲಿಸಿದರು. ಅವರ ಜೊತೆ ಪತ್ನಿ ,ಪುತ್ರ ಹಾಗೂ ಇನ್ನಿತರರು ಕೂಡ ಅವರೊಂದಿಗೆ ಇದ್ದರು.

“ತಿರುವರ್ ಕಾಡು ಭಗವತಿ” ಕ್ಷೇತ್ರದ ಪರವಾಗಿ ದೇವಸ್ಥನಾದ ಆಡಳಿತ ಮಂಡಳಿ ದರ್ಶನ್ ಅವರನ್ನು ಸ್ವಾಗತಿಸಿ ಸನ್ಮಾನಿಸಿದರು.ಈ ಹಿಂದೆ ರಾಜ್ಯದ ಹಲವು ಮಂತ್ರಿಗಳು ರಾಜಕಾರಣಿಗಳು ಚುನಾವಣೆಯ ಸಮಯದಲ್ಲಿ ಇಲ್ಲಿ ಬಂದು ಶತ್ರು ಸಂಹಾರ ಪೂಜೆ ಮಾಡಿ ದೇವರ ದರ್ಶನ ಪಡೆಯುತ್ತಾರೆ.

ಈ ದೇವಾಲಯವು ಮಲಬಾರಿನ ಪ್ರಮುಖ ಭದ್ರ ಕಾಳಿ ದೇವಾಲಯಗಳಲ್ಲಿ ಒಂದಾಗಿದೆ. ಇದು ಕಣ್ಣೂರು ಜಿಲ್ಲೆಯ ಪಯ್ಯನ್ನೂರು ರೈಲ್ವೆ ನಿಲ್ದಾಣದ ಬಳಿ ಇದೆ. ದೇವಿಯನ್ನು “ತಿರುವರ್ ಕಾಡು ಭಗವತಿ” ಎಂದೂ ಕರೆಯುತ್ತಾರೆ. ಮಾಟಮಂತ್ರದ ಪರಿಣಾಮಗಳನ್ನು ತೆಗೆದುಹಾಕಲು ಜನರು ಮುಖ್ಯವಾಗಿ ಅವಳನ್ನು ಪೂಜಿಸುತ್ತಾರೆ. ಇತರ ಭಗವತಿ ದೇವಾಲಯಗಳಿಗಿಂತ ಭಿನ್ನವಾಗಿ, ಈ ದೇವಾಲಯದಲ್ಲಿ ಮಾಂಸವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಇಟಾಲಿಯನ್ ಪ್ರವಾಸಿ ಮಾರ್ಕೊ ಪೊಲೊ ತನ್ನ ಆತ್ಮಚರಿತ್ರೆಯಲ್ಲಿ ಈ ದೇವಾಲಯದ ಬಗ್ಗೆ ಉಲ್ಲೇಖಿಸಿದ್ದಾನೆ.

ಈ ದೇವಾಲಯವು ಬಹಳ ಪ್ರಾಚೀನವಾದುದು ಮತ್ತು ಕನಿಷ್ಠ ಒಂದು ಸಾವಿರ ವರ್ಷಗಳಷ್ಟು ಹಳೆಯದು ಎಂದು ಇತಿಹಾಸಕಾರರು ನಂಬುತ್ತಾರೆ. ಈ ದೇವಿಯನ್ನು ಶಿವನು ಧರುಕ ಎಂಬ ಅಸುರನನ್ನು ಕೊಲ್ಲಲು ಸೃಷ್ಟಿಸಿದನು ಮತ್ತು ಸಪ್ತ ಮಾತೃಕರೊಂದಿಗೆ ಅಸುರನನ್ನು ಕೊಂದ ನಂತರ, ಈ ದೇವಿಯು ಆ ಸ್ಥಳದಲ್ಲಿಯೇ ಇರಲು ಬಯಸಿದಳು ಎಂಬ ನಂಬಿಕೆ ಇದೆ. ಶಿವನು ಅವಳ ಆಸೆಯನ್ನು ಈಡೇರಿಸಿದನು ಮತ್ತು ಇಂದಿಗೂ ಅವಳನ್ನು ಶಿವನ ಮಗಳೆಂದು ಪರಿಗಣಿಸಲಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular