Thursday, July 23, 2026
Homeರಾಜ್ಯಚಾಮರಾಜನಗರ ; ಸಿಎಂ ಸಿದ್ದರಾಮಯ್ಯ ಗೆ ಸಾರ್ವಜನಿಕರು,ರೈತರು ನೀಡಿದ ಮನವಿ ಪತ್ರ ಕಸದ ರಾಶಿಯಲ್ಲಿ ಪತ್ತೆ.!

ಚಾಮರಾಜನಗರ ; ಸಿಎಂ ಸಿದ್ದರಾಮಯ್ಯ ಗೆ ಸಾರ್ವಜನಿಕರು,ರೈತರು ನೀಡಿದ ಮನವಿ ಪತ್ರ ಕಸದ ರಾಶಿಯಲ್ಲಿ ಪತ್ತೆ.!

ಚಾಮರಾಜನಗರ ; ಒಂದು ಜಿಲ್ಲೆಗೆ ಮುಖ್ಯಮಂತ್ರಿ ಬಂದರೆ ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಮನವಿ ನೀಡುವುದು ಸರ್ವೇ ಸಾಮಾನ್ಯ ಆದರೆ ಜುಲೈ 10ರಂದು ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರೈತರು, ಆಕ್ಸಿಜನ್ ದುರಂತದ ಸಂತ್ರಸ್ತರು ಸಿಎಂ ಅವರಿಗೆ ಮನವಿ ಪತ್ರಗಳನ್ನು ನೀಡಿದ್ದರು. ವಿವಿಧ ಬೇಡಿಕೆಗಳ ಈಡೇರಿಕೆ ಮತ್ತು ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಮನವಿ ಸಲ್ಲಿಸಿದ್ದರು. ಆದರೆ ಸಿಎಂಗೆ ಸಲ್ಲಿಸಿದ್ದ ಮನವಿ ಪತ್ರಗಳು ಇದೀಗ ಕಸದ ರಾಶಿಯಲ್ಲಿ ಪತ್ತೆಯಾಗಿವೆ.ಇದರಿಂದ ತಿಳಿಯುತ್ತೆ ಬಡಪಾಯಿಗಳ ಮನವಿಗಳೆಲ್ಲ ಕಸದ ರಾಶಿಯೊಳಗೆ ಬಿದ್ದು ಸುಟ್ಟುಹೋಗಿರಬಹುದು.

ಇದ್ದ ಕೆಲಸ ಕಾರ್ಯಗಳನ್ನು ಬಿಟ್ಟು ಗಂಟೆಗಟ್ಟಲೆ ಕಾದು ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆಯಾಗಿವೆ. ಇದು ಸಿದ್ದರಾಮಯ್ಯ ನ ದುರಹಂಕಾರ ಎಂದು ಸಾರ್ವಜನಿಕರು ಆಕ್ರೋಶಹೊರಹಾಕಿದ್ದರೆ.ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಕಸದ ರಾಶಿಯಲ್ಲಿ ಮನವಿ ಪತ್ರಗಳು ಬಿದ್ದಿದ್ದು ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಕ್ಷಮೆ ಕೋರಬೇಕು. ಇಲ್ಲದಿದ್ರೆ ಸಿಎಂ ಜಿಲ್ಲೆಗೆ ಬಂದಾಗ ಕಪ್ಪುಬಾವುಟ ಪ್ರದರ್ಶಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular