Friday, August 14, 2026
Homeರಾಜ್ಯಶಿವಮೊಗ್ಗ : ಕಡಜದ ಹುಳು ಕಚ್ಚಿ 8 ವರ್ಷದ ಬಾಲಕ ಸಾವು.

ಶಿವಮೊಗ್ಗ : ಕಡಜದ ಹುಳು ಕಚ್ಚಿ 8 ವರ್ಷದ ಬಾಲಕ ಸಾವು.

ಶಿವಮೊಗ್ಗ : ಸಾಗರ ತಾಲೂಕಿನ ಹತ್ತಿಸರ ಗ್ರಾಮದಲ್ಲಿ ದುರಂತ
ಮನೆಯ ಹಿತ್ತಲಿನ ಬಾಳೆಗಿಡದಲ್ಲಿದ್ದ ಕಡಜದ ಗೂಡಿನಿಂದ ಹೊರಬಂದ ಹುಳುಗಳು ಬಾಲಕ ನಿಷ್ಮಿತ್ ಹಾಗೂ ತಂದೆ ವೆಂಕಟೇಶ್ ಅವರಿಗೆ ಕಚ್ಚಿವೆ.

ತೀವ್ರ ಅಸ್ವಸ್ಥಗೊಂಡಿದ್ದ 2ನೇ ತರಗತಿ ವಿದ್ಯಾರ್ಥಿ ನಿಷ್ಮಿತ್‌ನನ್ನು ಮೊದಲು ಹೆಗ್ಗೋಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆbಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.

ಬಾಲಕನ ತಂದೆ ವೆಂಕಟೇಶ್ ಅವರಿಗೂ ಕಡಜದ ಹುಳು ಕಚ್ಚಿದ್ದು, ತೀವ್ರ ಗಾಯಗೊಂಡಿರುವ ಅವರು ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular