Monday, July 6, 2026
Homeಜಿಲ್ಲೆಮಂಗಳೂರು : ಎಕ್ಕೂರು ಗ್ಯಾರೇಜ್ ಬಳಿ ನಿಂತಿದ್ದ ಬೈಕ್ ಕಳವು,ವಾರದ ಬಳಿಕ ಆರೋಪಿಯ ಬಂಧನ,ಬೈಕ್...

ಮಂಗಳೂರು : ಎಕ್ಕೂರು ಗ್ಯಾರೇಜ್ ಬಳಿ ನಿಂತಿದ್ದ ಬೈಕ್ ಕಳವು,ವಾರದ ಬಳಿಕ ಆರೋಪಿಯ ಬಂಧನ,ಬೈಕ್ ವಶಕ್ಕೆ.

ಮಂಗಳೂರು : ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಶಂಕಿತನನ್ನು ಬಂಧಿಸಿದ್ದಾರೆ. ಆರೋಪಿ ಸುರತ್ಕಲ್‌ನ ಕಾಟಿಪಳ್ಳದ ಇಡ್ಯ ನಿವಾಸಿ ಇಬ್ರಾಹಿಂ ಅಲಿಯಾಸ್ ಮೋನು ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯು 8 ನೇ ತಾರೀಖಿನಂದು ಪಂಪ್‌ವೆಲ್ ಪ್ರದೇಶದಲ್ಲಿ ಯಮಹಾ ಎಫ್‌ಝಡ್ ಬೈಕ್ ಅನ್ನು ಕದ್ದಿದ್ದು ಬಳಿಕ ಪರಾರಿಯಾಗಿದ್ದನು,ಎಕ್ಕೂರು ರಾಷ್ಟ್ರೀಯ ಹೆದ್ದಾರಿಯ ವಿ ಕೇರ್ ಗ್ಯಾರೇಜ್ ನಲ್ಲಿರುವ ಗಣೇಶ್ ಎಂಬಾತನಿಗೆ ಸೇರಿದ ಬೈಕ್ ಆಗಿದ್ದು ಆರೋಪಿ ಬೆಳ್ಳಂಬೆಳಗ್ಗೆ ಹ್ಯಾಂಡ್ ಲಾಕ್ ಅನ್ನು ಹೊಡೆದು ದೂಡಿಕೊಂಡು ಹೋಗಿ ನಕಲಿ ಕೀ ಸೃಷ್ಟಿಸಿ ಎಕ್ಕೂರು ಮೂಲಕ ಬೈಕ್ ಕಳವು ಮಾಡಿದ್ದನು.

ತನಿಖೆಯ ಆಧಾರದ ಮೇಲೆ, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 178/2025 ರ ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 303(2) ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿತ್ತು . ಸುರತ್ಕಲ್ ಬಳಿ ಆರೋಪಿಯನ್ನು 12 ರಂದು ಬಂಧಿಸಿದ್ದು , ಮತ್ತು ಕದ್ದ ಬೈಕ್ ಮತ್ತು ಅಪರಾಧಕ್ಕೆ ಬಳಸಿದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಅಂದಾಜು ಮೌಲ್ಯ ₹ 26,000 ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈತ ಬೈಕ್ ಕದ್ದು ಬೈಕಿನ ಕೀ ಸೆಟ್ ಬದಲಾಯಿಸಿದು ನಂಬರ್ ಪ್ಲೇಟ್ ಹಾಗೂ ಇನ್ನಿತರ ಬಿಡಿಭಾಗಗಳನ್ನು ಬದಲಾಯಿಸಿದ್ದು ಯಾರಿಗೂ ಗೊತ್ತಾಗದಂತೆ ಸ್ಟಿಕರ್ ಕಟಿಂಗ್ ಕೂಡ ಮಾಡಿ ಬೈಕ್ ನ ಸ್ವರೂಪರವನ್ನೇ ಬದಲಾಯಿಸಿದ್ದನು.

RELATED ARTICLES

LEAVE A REPLY

Please enter your comment!
Please enter your name here

Most Popular