Saturday, July 25, 2026
Homeಜಿಲ್ಲೆಕಾರ್ಕಳ: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಧಾಳಿ-ಸಿಕ್ಕಿಬಿದ್ದ ಗುಮಾಸ್ತ.

ಕಾರ್ಕಳ: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಧಾಳಿ-ಸಿಕ್ಕಿಬಿದ್ದ ಗುಮಾಸ್ತ.

ಕಾರ್ಕಳ : ಉಡುಪಿ ಲೋಕಾಯುಕ್ತ ಪೊಲೀಸರು ಅಜೆಕಾರ್ ನಾಡಕಚೇರಿ ಕಚೇರಿ ಮೇಲೆ ಗುರುವಾರ ದಾಳಿ ನಡೆಸಿ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಒಂದನೇ ವಿಭಾಗದ ಗುಮಾಸ್ತನನ್ನು ಬಂಧಿಸಿದ್ದಾರೆ.

ಕಚೇರಿಯ ಒಂದನೇ ವಿಭಾಗದ ಗುಮಾಸ್ತ ನಿಜಾಮುದ್ದೀನ್ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ. ಕುಟುಂಬದ ನಕ್ಷೆ ತಯಾರಿಸಲು ಹಿರ್ಗಾನಾ ಮೂಲದ ವ್ಯಕ್ತಿಯಿಂದ 5000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ದೂರುದಾರರು ಮೊದಲ ಕಂತಾಗಿ 4000 ರೂಪಾಯಿ ನೀಡಿ ಲೋಕಾಯುಕ್ತರಿಗೆ ವಿಷಯ ತಿಳಿಸಿದ್ದಾರೆ. ಅದರಂತೆ ನಿಜಾಮುದ್ದೀನ್ ಎರಡನೇ ಕಂತಾಗಿ 1000 ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ನಿಜಾಮುದ್ದೀನ್ ಕಳೆದ 15 ವರ್ಷಗಳಿಂದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ಪಿ ಸೈಮನ್, ಡಿವೈಎಸ್ಪಿ ಕೆ ಸಿ ಪ್ರಕಾಶ್, ಪಿಐ ರಫೀಕ್, ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ಮಲ್ಲಿಕಾ, ಸತೀಶ್, ಅಬ್ದುಲ್, ರವೀಂದ್ರ, ಸೂರಜ್ ಭಾಗವಹಿಸಿದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular