Saturday, July 25, 2026
Homeರಾಜ್ಯಉಡುಪಿ : ಶಾಸಕರಿಗೆ ಬೆದರಿಕೆ ಪ್ರಕರಣ: ಮುಂಬೈ ವಿಮಾನ ನಿಲ್ದಾಣದಲ್ಲಿ ಬಜ್ಪೆ ವ್ಯಕ್ತಿ ಬಂಧನ.

ಉಡುಪಿ : ಶಾಸಕರಿಗೆ ಬೆದರಿಕೆ ಪ್ರಕರಣ: ಮುಂಬೈ ವಿಮಾನ ನಿಲ್ದಾಣದಲ್ಲಿ ಬಜ್ಪೆ ವ್ಯಕ್ತಿ ಬಂಧನ.

ಉಡುಪಿ : ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಪು ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಆರೋಪಿ ಬಜ್ಪೆಯ ಮೊಹಮ್ಮದ್ ಆಸಿಫ್ (32) ಜೂನ್ 22 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಆಗಮಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದ ನಂತರ ಬಂಧಿಸಲಾಯಿತು.

ಪ್ರಮುಖ ಆರೋಪಿ ಬಜ್ಪೆ ಸಮೀಪದ ಕೆಂಜಾರುವಿನ ಮೊಹಮ್ಮದ್ ಶಾಫಿ (26)ನನ್ನು ಕಳೆದ ವರ್ಷ ಜೂನ್‌ನಲ್ಲಿ ಈಗಾಗಲೇ ಬಂಧಿಸಲಾಗಿದೆ.

ಹಿಜಾಬ್ ವಿಚಾರವಾಗಿ ಯಶಪಾಲ್ ಸುವರ್ಣ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಲಾಗಿತ್ತು.
RELATED ARTICLES

LEAVE A REPLY

Please enter your comment!
Please enter your name here

Most Popular