ಸುರಪುರ : ನಗರದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕಾಗಿ ಮಾಜಿ ಸಚಿವ ರಾಜುಗೌಡ ಸುದ್ದಿಗೋಷ್ಠಿ ನಡೆಸಿ ಹಾಲಿ ಶಾಸಕ ರಾಜ ವೆಂಕಟಪ್ಪ ನಾಯಕ ವಿರುದ್ಧ ಅಸಮಾಧಾನ ಹೊರ ಹಾಕಿದರು.
ನಾನು ಶಾಸಕನಾಗಿದ್ದಾಗ 2010 ಹಾಗೂ 2018ರಲ್ಲಿ 5.50 ಕೋಟಿ ರೂಪಾಯಿ ಅನುದಾನ ತಾಲೂಕು ಕ್ರೀಡಾಂಗಣಕ್ಕೆ ತಂದಿದ್ದು ಈಗಿನ ಶಾಸಕರು ಒಂದು ವರ್ಷದಲ್ಲಿ ಕ್ರೀಡಾಂಗಣ ನಿರ್ಮಿಸಿ ಕೊಡುತ್ತೇನೆ,ಹಿಂದಿನ ಶಾಸಕರು ಏನು ಮಾಡಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ,ಶಾಸಕರೆ ನೀವು ಇದುವರೆಗೆ ಕ್ರೀಡಾಂಗಣಕ್ಕೆ ಎಷ್ಟು ಅನುದಾನ ತಂದು ಹಾಕಿದ್ದೀರಿ ಎಂದು ಪ್ರಶ್ನಿಸಿದರು
ಬಾಲಕಿಯರ ವಸತಿ ನಿಲಯಕ್ಕೆ 5 ಕೋಟಿ ಅನುದಾನ ನಾನು ತಂದಿದ್ದು ನೀವು ಈಗ ಅಡಿಗಲ್ಲು ಹಾಕಿದ್ದೀರಿ ನೀವು ಎಷ್ಟು ಅನುದಾನ ತಂದಿರುವಿರಿ ಜನರಿಗೆ ತಿಳಿಸಿ ಎಂದರು.


