Thursday, March 12, 2026
Flats for sale
Homeರಾಜ್ಯಸುಬ್ರಮಣ್ಯ : ಕಡಬದಲ್ಲಿ ಇಬ್ಬರನ್ನು ಕೊಂದ ಕಾಡಾನೆ ಕೊಡಗಿನಲ್ಲಿ ಸಾವು.

ಸುಬ್ರಮಣ್ಯ : ಕಡಬದಲ್ಲಿ ಇಬ್ಬರನ್ನು ಕೊಂದ ಕಾಡಾನೆ ಕೊಡಗಿನಲ್ಲಿ ಸಾವು.

ಸುಬ್ರಹ್ಮಣ್ಯ : ಇತ್ತೀಚೆಗೆ ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಕಾಡಾನೆ ನಂತರ ಸಿಕ್ಕಿಬಿದ್ದಿದ್ದು, ಕೊಡಗು ಜಿಲ್ಲೆಯ ಮತ್ತಿಗೋಡು ಆನೆ ಶಿಬಿರದಲ್ಲಿ ಸಾವನ್ನಪ್ಪಿದೆ.

ಕಡಬದಲ್ಲಿ ಸಿಕ್ಕಿಬಿದ್ದ ಕೂಡಲೇ ಆನೆ ಶಿಬಿರಕ್ಕೆ ಸ್ಥಳಾಂತರಗೊಂಡು ಆಗಸ್ಟ್ 11ರಂದು ಶುಕ್ರವಾರ ಮೃತಪಟ್ಟಿತ್ತು. ಬಳಿಕ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಕಡಬ ತಾಲೂಕಿನ ಮೀನಾಡಿ ಸಮೀಪದ ನೈಲಾ ಎಂಬಲ್ಲಿ ಫೆ.20ರಂದು ಆನೆ ದಾಳಿಗೆ ರೆಂಜಿಲಾಡಿ ಗ್ರಾಮದ ರಂಜಿತಾ (24) ಹಾಗೂ ರಮೇಶ್ ರೈ (58) ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ನಂತರ ಸ್ಥಳೀಯರ ಒತ್ತಾಯದ ಮೇರೆಗೆ ಆನೆಯನ್ನು ಹಿಡಿಯಲು ಕಾರ್ಯಾಚರಣೆ ನಡೆಸಲಾಯಿತು. ದುಬಾರೆ ಮತ್ತು ತಿತಿಮತಿ ಆನೆ ಶಿಬಿರದ ಐದು ಆನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದ್ದು, ಮೂರನೇ ದಿನದ ಕಾರ್ಯಾಚರಣೆಯಲ್ಲಿ ಎರಡು ಆನೆಗಳು ಸಿಕ್ಕಿಬಿದ್ದಿವೆ.
RELATED ARTICLES

LEAVE A REPLY

Please enter your comment!
Please enter your name here

Most Popular