Thursday, March 12, 2026
Flats for sale
Homeಜಿಲ್ಲೆಮಂಗಳೂರು ; ಪಿಕ್ ಅಪ್ ವಾಹನದಲ್ಲಿ ಕರುಣಾಜನ ಸ್ಥಿತಿಯಲ್ಲಿ 25 ಗೋವುಗಳ ಅಕ್ರಮ ಸಾಗಾಟ,ಭಜರಂಗದಳದಿಂದ ತಡೆದು...

ಮಂಗಳೂರು ; ಪಿಕ್ ಅಪ್ ವಾಹನದಲ್ಲಿ ಕರುಣಾಜನ ಸ್ಥಿತಿಯಲ್ಲಿ 25 ಗೋವುಗಳ ಅಕ್ರಮ ಸಾಗಾಟ,ಭಜರಂಗದಳದಿಂದ ತಡೆದು ರಕ್ಷಣೆ…!

ಮಂಗಳೂರು : ಕಳೆದೊಂದು ತಿಂಗಳಿನಿಂದ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ ಪ್ರಕರಣಗಳು ಹೆಚ್ಚಾಗಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು ಇದನ್ನು ಪತ್ತೆ ಹಚ್ಚಿದ್ದ ಘಟನೆ ನಡೆದಿದೆ.

ಗೋ ವಧಾ ಕೇಂದ್ರ ಇಲ್ಲದೇ ಇದ್ರೂ ಗೋ ಮಾಂಸ ಎಲ್ಲಿಂದ ಬರ್ತಾ ಇದೆ ಅಂತ ಸಂಘಟನೆಯ ಪ್ರಮುಖರು ಇದನ್ನು ನಿಯಂತ್ರಿಸಲು ಪೊಲೀಸರಿಗೆ ಒತ್ತಡ ಹಾಕಿದ್ದಾರೆ. ಆದರೆ ಇದರ ಬೆನ್ನಲ್ಲೇ ಮತ್ತೆ ಮಂಗಳೂರಿನ ಹೊರವಲಯ ಗುರುಪುರ ಕೈಕಂಬ ಬಳಿ ಸೂರಲ್ಪಾಡಿಯಲ್ಲಿ ಇಂದು 25 ಗೋವುಗಳನ್ನು ರಕ್ಷಣೆ ಮಾಡಲಾಗಿದೆ.

ಪಿಕ್ ಅಪ್ ವಾಹನದಲ್ಲಿ ಕರುಣಾಜನ ಸ್ಥಿತಿಯಲ್ಲಿ 25 ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಮಾಹಿತಿ ಮೆರೆಗೆ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿದ್ದಾರೆ‌. ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ 25 ಗೋವುಗಳನ್ನು ತುಂಬಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿ ವಾಹನ ಹಾಗೂ ಗೋವುಗಳನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.

ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವಿಹೆಚ್ ಪಿ ಯ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದು ಈಗಾಗಲೇ ಅಕ್ರಮ ಗೋ ಸಾಗಾಟ ಹಾಗೂ ಗೋ ವಧೆಯನ್ನು ನಿಲ್ಲಿಸಲು ಮನವಿ ಮಾಡಿದ್ದೇವೆ. ಆದ್ರೆ ಗೋ ಸಾಗಟ ಹಾಗೂ ಗೋ ವಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ನಮ್ಮ ಸಂಘಟನೆಯ ಯುವಕರೇ ಇದನ್ನು ಪತ್ತೆ ಹಚ್ಚಿ ಪೊಲೀಸರಿಗೆ ನೀಡ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಇದರಿಂದ ಏನೇ ಅಹಿತಕರ ಘಟನೆ ನಡೆದ್ರೂ ಜಿಲ್ಲಾಡಳಿತ ಹಾಗೂ ಪೊಲೀಸರೇ ಜವಾಬ್ದಾರರಾಗಬೇಕಾಗುತ್ತದೆ. ಹೀಗಾಗಿ ಸೂಕ್ತ ರೀತಿಯಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular