ಮಂಗಳೂರು ; ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುವ ಕುಂಭಮೇಳದ ಹಿನ್ನೆಲೆ ಫೆಬ್ರವರಿ 15 ರಂದು ವಿಶೇಷ ರೈಲು ಸೇವೆಯ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ನಡೆಯುವ ಐತಿಹಾಸಿಕ ಕುಂಭಮೇಳ ನಡೆಯುವುದರಿಂದ ದೇಶಾದ್ಯಂತ ಭಕ್ತರು ಪ್ರಯಾಣಿಸುತ್ತಿದ್ದು ಈ ಹಿನ್ನಲೆ ಕರಾವಳಿ ಭಾಗದ ಜನರಿಗೆ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಂಗಳೂರಿನಿಂದ ಫೆಬ್ರವರಿ 15 ರಂದು ಶನಿವಾರ ಮುಂಜಾನೆ ಮಂಗಳೂರು-ವಾರಾಣಸಿ ವಿಶೇಷ ರೈಲು ಸೇವೆ ಆರಂಭಿಸಿದ್ದು ರೈಲು ಸಂಖ್ಯೆ 06019 ಮಂಗಳೂರು ಸೆಂಟ್ರಲ್ ಬನಾರಸ ಎಕ್ಸಪ್ರೇಸ್, ಈ ರೈಲು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಫೆಬ್ರುವರಿ 15ರಂದು ಬೆಳಗ್ಗೆ 4:15 ಕ್ಕೆ ಹೊರಟು ಫೆಬ್ರುವರಿ 17 ಮುಂಜಾನೆ 10:25 ಕ್ಕೆ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ರಾಜ್ ಚೌಕಿಯನ್ನ ತಲುಪುತ್ತದೆ. ಇದೇ ರೈಲು ಮರಳಿ ರೈಲು ಸಂಖ್ಯೆ 06020 ಪ್ರಯಾಗ್ರಾಜ್ ಚೌಕಿಯಿಂದ ಫೆಬ್ರುವರಿ 18ರಂದು ರಾತ್ರಿ 9:30 ಕ್ರೆ ಹೊರಟು ಫೆಬ್ರುವರಿ 21ರಂದು ರಾತ್ರಿ 2:30ಕ್ಕೆ ಮಂಗಳೂರು ಸೆಂಟ್ರಲ್ ತಲುಪುತ್ತದೆ ಎಂದು ಮಾಹಿತಿ ನೀಡಿದ್ದಾರೆ.