ಮಂಗಳೂರು : ಮಂಗಳೂರಿನ ಅಂದ ಹೆಚ್ಚಿಸಲು ಕ್ಲಾಕ್ ಟವರ್ ನಿರ್ಮಿಸಲಾಗಿದೆ ಆದರೆ ನಿರ್ಮಾಣಗೊಂಡು ವರ್ಷಗಳೇ ಕಳೆದ್ರೂ ಇನ್ನು ಪರಿಪೂರ್ಣತೆಯನ್ನು ಕಂಡಿಲ್ಲದಿರುವುದೇ ಕೆದಕರ. ಹಗಲು ರಾತ್ರಿ ಎನ್ನದೇ ಈ ಕ್ಲಾಕ್ ಟವರ್ ಈಗ ನಿರಾಶ್ರಿತರ ತಾಣವಾಗಿದೆ. ಆದರೆ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಬೇಸರದ ಸಂಗತಿ. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಪ್ರಮುಖ ಸ್ಥಳವಾದ ಕ್ಲಾಕ್ ಟವರ್ ಸುಂದರವಾಗಿ ನಿರ್ಮಾಣವಾಗಿದೆ. ಆದರೆ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದ ವೃತ್ತ ಹಾಗೂ ರಸ್ತೆ ವಿಭಾಜಕದಿಂದಾಗಿ ಜನರು ಹಲವು ಸಮಸ್ಯೆ ಎದುರಿಸುವಂತಾಗಿದೆ.


ಮಂಗಳೂರು ನಗರದ ಹಂಪನಕಟ್ಟೆಯ ಕ್ಲಾಕ್ ಟವರ್ ಸಮೀಪದ ಡಿವೈಡರ್ಗಳಲ್ಲಿ ಸೂಕ್ತ ರೀತಿಯಲ್ಲಿ ತಡೆಬೇಲಿಯನ್ನು ಅಳವಡಿಸದೇ ಹಲವು ಕಡೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಾಹನ ದಟ್ಟಣೆಯ ಸಮಯದಲ್ಲೂ ರಸ್ತೆ ದಾಟುತ್ತಿದ್ದು ಅಪಾಯಕಾರಿಯಾಗಿ ಗೋಚರಿಸುತ್ತಿದೆ, ರಸ್ತೆಯ ವಿಭಾಜಕ ಅವೈಜ್ಞಾನಿಕವಾಗಿರುವ ಕಾರಣ ಅನೇಕ ವಾಹನಗಳು ವಿಭಾಜಕಕ್ಕೆ ಡಿಕ್ಕಿ ಹೊಡೆದು ಅಪಾಯ ಸಂಭವಿಸಿದ್ದು ವಿಭಾಜಕ ಕೂಡಾ ಹಾನಿಯಾಗಿದೆ. ಇನ್ನು ಮಂಗಳೂರು ಯುನಿವರ್ಸಿಟಿಯಿಂದ ಕ್ಲಾಕ್ ಟವರ್ ತನಕದ ವಿಭಾಜಕದಲ್ಲಿ ಸರಿಯಾದ ತಡೆ ಬೇಲಿ ಕೂಡಾ ಅಳವಡಿಸದೆ ನಿರ್ಲಕ್ಷ್ಯ ತೋರಿಸಲಾಗಿದೆ. ಇದು ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದು, ಯುನಿವರ್ಸಿಟಿ ವಿದ್ಯಾರ್ಥಿಗಳು, ವೆನ್ಲಾಕ್ ಆಸ್ಪತ್ರೆಗೆ ಬರುವ ರೋಗಿಗಳು ಸೇರಿದಂತೆ ನಿತ್ಯ ಸಂಚರಿಸುವ ಜನರಿಗೆ ಸಂಚಕಾರ ತಂದಿದೆ.
ಕಳೆದ 29 ವರ್ಷಗಳಿಂದ ಮಂಗಳೂರಿನಲ್ಲೇ ಜಾಂಡಾ ಹೂಡಿರುವ ಅಧಿಕಾರಿಗಳ ಅಧಿಕ ಪ್ರಸಂಗತನದಿಂದ ಈ ಕಾಮಗಾರಿ ವಿಳಂಬವಾಗಿದೆ ಎಂದು ತಿಳಿದುಬಂದಿದೆ. ಇದಕ್ಕೆ ಮುಖ್ಯ ಸೂತ್ರಧಾರಿ ಮಂಗಳೂರು ನಗರ ಪಾಲಿಕೆಯ ಇಂಜಿನಿಯರ್ ನರೇಶ್ ಶೆಣೈ. ತಂದೆ ಮೀಟರ್ ರೀಡಿಂಗ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರ ನಿಧನ ನಂತರ ಜೂನಿಯರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ ನರೇಶ್ ಶೆಣೈ..ಹಂತ ಹಂತವಾಗಿ ಮಂಗಳೂರು ಮಹಾನಗರ ಪಾಲಿಕೆ ಯಲ್ಲಿ ತನ್ನ ಪ್ರಭಾವದಿಂದ ಬಿಎ ಓದಿರುವ ನರೇಶ್ ಶೆಣೈ ಸೀನಿಯರ್ ಇಂಜಿನಿಯರ್ ಹುದ್ದೆ ಪಡೆಯಬೇಕಾದರೆ ಡಿಪ್ಲೊಮಾ ಮಾಡಿರಬೇಕು ಆದರೆ ಈ ಉದ್ದೆ ಗಿಟ್ಟಿಸಿಕೊಂಡಿದ್ದೆ ಆಶ್ಚರ್ಯಕರ. ಆದರೆ 29 ವರ್ಷದಿಂದ ಜಾಂಡಾ ಹೂಡಿರುವ ನರೇಶ್ ಶೆಣೈ ಹಣದ ಪ್ರಭಾವ ಬಳಸಿ ಸೀನಿಯರ್ ಇಂಜಿನಿಯರ್ ಪೋಸ್ಟ್ ಪಡೆದುಕೊಂಡಿದ್ದಾರೆ.
ಆದರೆ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕ್ಲಾಕ್ ಟವರ್ ಬಳಿಯ ಕಾಮಗಾರಿ ನಡೆಸಲು ಮಾತ್ರ ಜನಪ್ರತಿನಿಧಿಗಳು ಮಾತ್ರ ತಮ್ಮ ಸ್ವ ಪ್ರತಿಷ್ಠೆಯನ್ನು ಉಳಿಸಿ ಕೊಳ್ಳಲು ಕಾಮಗಾರಿ ನಡೆಸಲು ಬಿಡುತ್ತಿಲ್ಲ ಎಂಬುವುದೇ ಈ ನರೇಶ್ ಶೆಣೈ ಕೊಡುವ ಸಮಜಾಯಿಸಿಯಾಗಿದೆ. ಹಾಗಾದರೆ ಈ ಹುದ್ದೆಗೆ ಅರ್ಹರೇ ಎಂಬ ಮಾತು ಕೂಡಾ ಕೇಳಿ ಬರ್ತಾ ಇದೆ..ನಗರಪಾಲಿಕೆ ಕಮಿಷನರ್ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಗೆ ಕೂಡ ಮನವಿ ನೀಡಲಾಗಿದ್ದರೂ ಯಾರದೋ ಒತ್ತಡಕ್ಕೆ ಮಣಿದು ಈ ಕಾಮಗಾರಿ ಕೈ ಗೆತ್ತಿ ಕೊಳ್ಳುತ್ತಿಲ್ಲ ಎಂದು ತಿಳಿದುಬಂದಿದೆ.ಆದರೆ ಈತ ಪ್ರಸ್ತುತ ಸರಕಾರದ ಪ್ರಭಾವಿಯ ಪಿ.ಎ ಗೆ 55 ಲಕ್ಷ ಕೊಟ್ಟು ಮತ್ತೆ ತನ್ನ ಸ್ಥಳವನ್ನು ಗಟ್ಟಿಯಾಗಿಸಿದ್ದಾನೆಂದು ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ.ಒಟ್ಟಿನಲ್ಲಿ ಈತ ಈ ರೀತಿ ಕೋಟಿ ಕೋಟಿ ಮಂತ್ರಿಗಳಿಗೆ ನೀಡಿದರೆ ಬಡಜನರಿಂದ ಹಾಗೂ ಇನ್ನಿತರ ಎಡೆಯಿಂದ ಯಾವ ಮಟ್ಟಿಗೆ ಭ್ರಷ್ಟಾಚಾರ ಮಾಡಿ ಹಣ ಲೂಟಿ ಹೊಡೆಯುತ್ತಿದ್ದನೆಂದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ದಕ್ಷಿಣ ಕ್ಷೇತ್ರ ದ ಶಾಸಕರಾದ ವೇದವ್ಯಾಸ ಕಾಮತ್ ಅವರು ಹಲವು ಬಾರಿ ಅಧಿಕಾರಿಗಳಿಗೆ ಕ್ಲಾಕ್ ಟವರ್ ಕಾಮಗಾರಿ ಪೂರ್ಣ ಗೊಳಿಸಲು ಹೇಳಿದರು ಅಧಿಕಾರಿಗಳು ಮಾತ್ರ ಶಾಸಕರ ಮಾತಿಗೆ ಕವಡೆ ಮಾತಿನ ಕೀಮತ್ತು ನೀಡುತ್ತಿಲ್ಲ. ರಸ್ತೆ ಮಧ್ಯ ರಿಂಗ್ ರೋಲ್ ಅಳವಡಿಸಲು ಆಗುತ್ತಿಲ್ಲ.ನಗರದ ಕೇಂದ್ರ ಭಾಗವನ್ನು ಸುಂದರ ಗೊಳಿಸಬೇಕಾದ ಯಾರದೋ ಒತ್ತಡಕ್ಕೆ ಮಣಿದು .1.5 ಕೋಟಿ ವೆಚ್ಚ ಮಾಡಿ ನಿರ್ಮಿಸಿದ ಕ್ಲಾಕ್ ಟವರ್ ಅಂದವನ್ನು ಕೆಡಿಸ ಹೊರಟಿದ್ದಾರೆ. ಅಲ್ಲಿರುವ ನೀರಿನ ಕಾರಂಜಿಯೂ ಮಾಯವಾಗಿದ್ದು ಇದೀಗ ಜನರ ತೆರಿಗೆಯ ದುಡ್ಡನ್ನು ಪೋಲುಮಾಡುತ್ತಿದ್ದರೆಂದು ಆಕ್ರೋಶ ಹೊರಹಾಕಿದ್ದಾರೆ.


