ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಎಲ್ಲವೂ ಮುಗಿದೋಯ್ತು ಅಂದುಕೊಂಡಾಗಲೇ ಹೊಸ ಅದ್ಯಾಯ ಶುರುವಾಗಿದೆ. ಧರ್ಮಸ್ಥಳದ ಬುರುಡೆ ಮತ್ತು ಅಸ್ಥಿಪಂಜರ ಶೋಧ ಪ್ರಕರಣ ಹೊಸ ದಿಕ್ಕಿಗೆ ಬಂದು ನಿಂತಿದೆ. ಯಾವ ಸ್ಥಳದಲ್ಲಿ 17 ಗುಂಡಿ ತೋಡಿ ಏನು ಸಿಗದೇ ಇದ್ದಾಗ ವಿಚಾರಣೆ ಆರಂಭಿಸಿತ್ತು. ಇದೀಗ ಅದೇ ಎಸ್ಐಟಿ ಮತ್ತೆ ಬಂಗ್ಲೆಗುಡ್ಡದ ಕಾಡಿಗೆ ಬಂದು ನಿಂತಿದೆ. ಶವಗಳ ಶೋಧಕ್ಕೆ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದು, ಈ ವೇಳೆ ಮೂಳೆಗಳು ಪತ್ತೆಯಾಗಿವೆ.ಈ ಮೂಳೆಯನ್ನು ಅಧಿಕಾರಿಗಳು
ಎಸ್ಐಟಿ ಶೋಧದ ವೇಳೆ ಅಲ್ಪಸ್ವಲ್ಪ ಮೂಳೆಗಳು ಪತ್ತೆಯಾಗಿವೆ. ಸೋಕೋ ತಂಡ ಮೂಳೆ ಪತ್ತೆಯಾದ ಭಾಗದ ಮಣ್ಣಿನ ಸ್ಯಾಂಪಲ್ ಪಡೆದಿದ್ದು, ಈ ಜಾಗವನ್ನ ಎಸ್ಐಟಿ ಮಹಜರು ಮಾಡುತ್ತಿದೆ. ಭೂಮಿಯ ಮೇಲ್ಭಾಗದಲ್ಲಿದ್ದ ಬಟ್ಟೆ ತುಂಡುಗಳು ಕೂಡ ಸಿಕ್ಕಿವೆ. ವಿಠ್ಠಲ್ಗೌಡನ ಹೇಳಿಕೆ, ಮೂಳೆ ಸಿಕ್ಕಿರೋ ಬೆಳವಣಿಗೆ ಪ್ರಕರಣದ ಕುತೂಹಲ ಹೆಚ್ಚಿಸಿದೆ.ಒಟ್ಟಿನಲ್ಲಿ ಧರ್ಮಸ್ಥಳ ಪ್ರಕರಣ ಸದ್ಯಕ್ಕೆ ಮುಗಿಯದ ಕೆಲಸದಂತಾಗಿದೆ.


