ಬೆಳ್ತಂಗಡಿ : ಕಳೆದ ಹಲವು ತಿಂಗಳಿಂದ ಧರ್ಮಸ್ಥಳ ಗ್ರಾಮದಲ್ಲಿ ಹೈಡ್ರಾಮಾ ನಡೆಯುತ್ತಿದೆ.ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ದಫನ ಮಾಡಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜುಲೈ 4 ರಂದು ದೂರು ನೀಡಿದ ವ್ಯಕ್ತಿ ಜುಲೈ 11 ರಂದು (ಇಂದು) ಸಂಜೆ 4:40 ಕ್ಕೆ ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಇಬ್ಬರು ವಕೀಲರ ಜೊತೆ ಹಾಜರಾಗಿದ್ದಾನೆ. ವಕೀಲರು ಮುಖಕ್ಕೆ ಕವರ್ ಮಾಡಿ ಆತನನ್ನು ಕರೆತಂದಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್.ಕೆ ಮುಂದೆ ಹಾಜರಾಗಿ BNS 183 ಹೇಳಿಕೆ ನೀಡುತ್ತಿದ್ದಾನೆಂದು ಮಾಹಿತಿ ದೊರೆತಿದೆ.