ಬೆಂಗಳೂರು :ಕರ್ನಾಟಕದಲ್ಲಿ ಗುರುವಾರ ಮುಸ್ಲಿಂ ಬಾಂಧವರು ಈದ್ ಅಲ್-ಅಧಾವನ್ನು ಸಂಭ್ರಮದಿಂದ ಆಚರಿಸಿದರು. ಮುಸ್ಲಿಂ ಹಬ್ಬವು ಆಷಾಢ ಏಕಾದಶಿ ಅಥವಾ ದೇವಶಯನಿ ಏಕಾದಶಿಯೊಂದಿಗೆ ಹೊಂದಿಕೆಯಾಯಿತು, ಅಲ್ಲಿ ರಾಜ್ಯದ ವಿಷ್ಣು ದೇವಾಲಯಗಳನ್ನು ಅಲಂಕರಿಸಲಾಗಿತ್ತು ಮತ್ತು ವಿಶೇಷ ಪೂಜೆಯನ್ನು ಮಾಡಲಾಯಿತು. ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ರಾಜ್ಯದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಈದ್ ಹಬ್ಬದ ಶುಭ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದರು. ದಕ್ಷಿಣ ಕನ್ನಡದಲ್ಲಿ ಮುಸ್ಲಿಮರು ಜೂನ್ 29, ಗುರುವಾರ ಈದ್-ಅಲ್-ಅಧಾ (ಬಕ್ರೀದ್) ಅನ್ನು ಸಾಂಪ್ರದಾಯಿಕ ಉತ್ಸಾಹದಿಂದ ಆಚಾರಿಸಲಾಯ್ತು. ನೂರಾರು ಭಕ್ತರು ಎದ್ಗಾ ಮತ್ತು ಮಸೀದಿಗಳಲ್ಲಿ ಈದ್ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ಕೋರಿದರು. ಬಾವುಟ ಗುಡ್ಡದ ಈದ್ಗಾ ಮಸೀದಿ, ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಹಾಗೂ ವಿವಿಧ ಮಸೀದಿಗಳಲ್ಲಿ ಈದ್ ನಮಾಝ್ ಹಾಗೂ ಖುತ್ಬಾ ನಡೆಯಿತು. ಈ ಶುಭ ದಿನದಂದು ಜನರು ಪರಸ್ಪರ ಶುಭಾಶಯ ಕೋರುವುದನ್ನು ಕಾಣಬಹುದು.


