ಧಾರವಾಡ : ಸರ್ಕಾರಿ ಕಚೇರಿ ಆವರಣದ ಒಳಗಿದ್ದ ಶ್ರೀಗಂಧ ಮರವನ್ನು ಖದೀಮರು ಕಡಿದು ಹೊತ್ತೊಯ್ದ ಘಟನೆ ನಗರದ ಸಿಟಿ ಸರ್ವೆ ಕಚೇರಿ ಆವರಣದಲ್ಲಿ ನಡೆದಿದೆ.
ಸಿಟಿ ಸರ್ವೆ ಕಚೇರಿ ಆವರಣದಲ್ಲಿದ್ದ ಮೂರು ಶ್ರೀಗಂಧ ಮರಗಳನ್ನೂ ಕತ್ತರಿಸಿಕೊಂಡ ಕಳ್ಳರು ಹೋಗಿದ್ದು ಬೆಳಗ್ಗೆ ಬಂದು ನೋಡಿದ್ದಾಗ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ನಗರದ ಸಿಟಿ ಸರ್ವೆ ಕಚೇರಿ ಆವರಣದಲ್ಲಿ ಹಲವು ಮರಗಳಿದ್ದು ಮರಗಳು ಕೂಗಳತೆಯಲ್ಲಿ ಅರಣ್ಯ ಇಲಾಖೆಯಾ ಕಛೇರಿನೂ ಇದೆ.ಸುಮಾರು ಹತ್ತು ವರ್ಷದ ಗಂಧದ ಮರಗಳು ಇದಾಗಿದ್ದು ಉಪನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


