ಕೋಟ : ಭಾನುವಾರ ರಾತ್ರಿ ಅವರ್ಸೆ ಸಮೀಪದ ಕಿರಾಡಿ ಎಂಬಲ್ಲಿ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದಾಗ ಸಿಡಿಲು ಬಡಿದು ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.
ಕಿರಾಡಿಯ ಬಾಬಣ್ಣ ಶೆಟ್ಟಿ ಎಂಬವರ ಪುತ್ರ ಪ್ರಮೋದ್ ಶೆಟ್ಟಿ (24) ಮೃತ ವ್ಯಕ್ತಿ. ದುರಂತ ಸಂಭವಿಸಿದಾಗ ಅವರು ತಮ್ಮ ಮನೆಯ ಹೊರಗೆ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ.
ಪ್ರಮೋದ್ ಬ್ರಹ್ಮಾವರದ ಜವಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.


