ಕಾರ್ಕಳ : ವಿದ್ಯಾರ್ಥಿಗಳ ಜನಿವಾರತೆಗೆಸಿದ ಆರೋಪದ ಮೇರೆಗೆ ಅತಿಥಿ ಶಿಕ್ಷಕನನ್ನು ಕರ್ತವ್ಯದಿಂದ ವಜಾ ಗೊಳಿಸಿದ ಘಟನೆ ಸೋಮವಾರ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಿ ನಡೆದಿದೆ. ಮೂಲತಃಕಲಬುರಗಿಯನಿವಾಸಿ, ದೈಹಿಕ ಶಿಕ್ಷಣ ಶಿಕ್ಷಕ ಮದರಶಾ ಎಸ್. ಮಕಾಂದರ್ ವಜಾಗೊಂಡ ಶಿಕ್ಷಕ.
ಈ ಶಿಕ್ಷಕ 2025ರ ಜೂನ್ನಲ್ಲಿ ಅತಿಥಿ ಶಿಕ್ಷಕನಾಗಿ ಸೇರ್ಪಡೆಗೊಂಡಿ ದ್ದರು. ವಿದ್ಯಾರ್ಥಿಗಳಿಗೆ 200 ಬಸ್ಕಿ ಹೊಡೆಸುವುದು, ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ಅವರ ಜನಿವಾರ ಮತ್ತು ಕೈಗೆ ಕಟ್ಟಿರುವ ದಾರವನ್ನು ತೆಗೆಸುವುದು ಇತ್ಯಾದಿ ಕೃತ್ಯಗಳ ಮೂಲಕ ಪೋಷಕರ ಕೆಂಗಣ್ಣಿಗೆ ತುತ್ತಾಗಿದ್ದರು.
ಮಕ್ಕಳ ದೂರಿನ ಮೇರೆಗೆ ಪೋಷಕರು, ಊರವರು ಸೋಮ ವಾರ ಶಾಲೆಗೆ ಆಗಮಿಸಿ ಶಿಕ್ಷಕನನ್ನು ತರಾಟೆಗೆ ಪೊಲೀಸರೂ ತೆಗೆದುಕೊಂಡರು. ಆಗಮಿಸಿದ್ದರು. ಮೊದಲು ಅನೇಕ ಬಾರಿ ಎಚ್ಚರಿಕೆ ಮಕಾಂದಾರ್ಗೆ ಈ ಬಗ್ಗೆ ಈ ನೀಡಿದ್ದರೂ ಇದೇ ಪ್ರವೃತ್ತಿ ಮುಂದು ವರಿಸಿದ್ದಾರೆ ಎಂದು ಪೋಷಕರು ಪ್ರಾಂಶುಪಾಲರು ಆ ಶಿಕ್ಷಕನ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಕ್ರಮ ಕೈಗೊಂಡಿದ್ದಾರೆ.


