Tuesday, October 21, 2025
Flats for sale
Homeಕ್ರೈಂಕಾಪು: ಶರತ್ ಶೆಟ್ಟಿ ಹತ್ಯೆ- ಪೊಲೀಸರಿಗೆ ಮಹತ್ವದ ಸುಳಿವು, ಭೂ ಮಾಫಿಯಾದ ನಂಟು !

ಕಾಪು: ಶರತ್ ಶೆಟ್ಟಿ ಹತ್ಯೆ- ಪೊಲೀಸರಿಗೆ ಮಹತ್ವದ ಸುಳಿವು, ಭೂ ಮಾಫಿಯಾದ ನಂಟು !

ಕಾಪು ; ಇಲ್ಲಿನ ಪಾಂಗಾಳದಲ್ಲಿ ಚರ್ಚೆ ನಡೆಸುವ ನೆಪದಲ್ಲಿ ಕರೆಸಿ ಚಾಕುವಿನಿಂದ ಇರಿದು ಹತ್ಯೆಗೈದ ಶರತ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.

ಗುತ್ತಿಗೆ, ಭೂ ಡೀಲ್ ಸೇರಿದಂತೆ ನಾನಾ ಕಾಮಗಾರಿಗಳನ್ನು ಮಾಡುತ್ತಿದ್ದ ಶರತ್ ಶೆಟ್ಟಿ ಜತೆ ಕೆಲ ಅಪರಿಚಿತರು ದೂರವಾಣಿ ಮೂಲಕ ಮಾತನಾಡಿದ್ದರು.

ಮೃತ ಶರತ್ ಶೆಟ್ಟಿ ಹಿನ್ನೆಲೆಯ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಎರಡು ತಿಂಗಳ ಹಿಂದೆ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳದ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ. ಜಗಳದಲ್ಲಿ ತೊಡಗಿದ್ದವರ ಸುತ್ತ ನಿಗಾ ಹೆಚ್ಚಿಸಿದ್ದಾರೆ. ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಬೈಕ್‌ನಲ್ಲಿ ಮೂವರು ಚಾಕುಗಳನ್ನು ಹಿಡಿದುಕೊಂಡು ಹೋಗುತ್ತಿದ್ದ ದೃಶ್ಯಗಳು ಪತ್ತೆಯಾಗಿವೆ . ಕೃತ್ಯದಲ್ಲಿ ನಾಲ್ವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಸೋಮವಾರ ಸಂಜೆ ಶರತ್ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಯ ನಂತರ ಅವರ ಮನೆಗೆ ತಂದು ನೂರಾರು ಜನರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular