Sunday, July 13, 2025
Flats for sale
Homeಜಿಲ್ಲೆಬಂಟ್ವಾಳ : ಜಮೀನಿನಲ್ಲಿ ಮೇಯಲು ಬಿಟ್ಟ ಹಸುವನ್ನು ಕೊಂದ ಚಿರತೆ .

ಬಂಟ್ವಾಳ : ಜಮೀನಿನಲ್ಲಿ ಮೇಯಲು ಬಿಟ್ಟ ಹಸುವನ್ನು ಕೊಂದ ಚಿರತೆ .

ಬಂಟ್ವಾಳ : ತಾಲೂಕಿನ ಪಂಜಿಕಲ್ಲು ಗ್ರಾಮದ ಕೆಲ್ದೊಡ್ಡಿ ಎಂಬವರ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಹಸುವನ್ನು ಚಿರತೆ ಕೊಂದು ಹಾಕಿದೆ. ಘಟನೆ ಸೋಮವಾರ ಜನವರಿ 16 ರಂದು ಬೆಳಕಿಗೆ ಬಂದಿದೆ.

ಕೆಲ್ದೊಡ್ಡಿ ನಿವಾಸಿ ಶೀನಪ್ಪ ಪೂಜಾರಿ ಎಂಬುವವರ ಜಮೀನಿನಲ್ಲಿ ಹಸುವಿನ ಮೃತದೇಹ ಪತ್ತೆಯಾಗಿದೆ. ಭಾನುವಾರ ರಾತ್ರಿ ಹಸುವಿನ ಮೇಲೆ ಚಿರತೆ ದಾಳಿ ಮಾಡಿದೆ.

ಭಾನುವಾರ ಬೆಳಗ್ಗೆ ಎರಡು ಹಸುಗಳನ್ನು ಮೇಯಲು ಬಿಡಲಾಗಿತ್ತು. ಒಂದು ಹಸು ಸಂಜೆ ಕೊಟ್ಟಿಗೆಗೆ ಮರಳಿತು. ಇನ್ನೊಂದು ಜಮೀನಿನಲ್ಲಿ ಮೇಯುತ್ತಿತ್ತು. ಆದರೆ ಸೋಮವಾರ ಬೆಳಗ್ಗೆ ಪತ್ತೆಯಾಗಿರಲಿಲ್ಲ. ಸುದೀರ್ಘ ಹುಡುಕಾಟದ ನಂತರ ಜಮೀನಿನ ಮೂಲೆಯಲ್ಲಿ ಅದರ ಮೃತದೇಹ ಪತ್ತೆಯಾಗಿದೆ.

ಬಂಟ್ವಾಳ ಅರಣ್ಯ ಇಲಾಖೆಗೆ ಸೂಕ್ತ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪಶು ವೈದ್ಯಾಧಿಕಾರಿ ಅವಿನಾಶ್ ಭಟ್ ಶವದ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಅಂತ್ಯಕ್ರಿಯೆ ನಡೆಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular