Tuesday, February 3, 2026
Flats for sale
Homeಜಿಲ್ಲೆಬೆಂಗಳೂರು : ಬೆಂಗಳೂರು ಕಂಬಳ ವೀಕ್ಷಿಸಿ ಹಿಂತಿರುಗುತ್ತಿದ್ದ ವೇಳೆ ಕುಣಿಗಲ್‌ನಲ್ಲಿ ಲಾರಿ-ಕಾರು ಡಿಕ್ಕಿ, ಇಬ್ಬರು ಸಾವು...

ಬೆಂಗಳೂರು : ಬೆಂಗಳೂರು ಕಂಬಳ ವೀಕ್ಷಿಸಿ ಹಿಂತಿರುಗುತ್ತಿದ್ದ ವೇಳೆ ಕುಣಿಗಲ್‌ನಲ್ಲಿ ಲಾರಿ-ಕಾರು ಡಿಕ್ಕಿ, ಇಬ್ಬರು ಸಾವು ಮೂವರಿಗೆ ಗಾಯ.

ಬೆಂಗಳೂರು : ಬೆಂಗಳೂರು ಕಂಬಳದಲ್ಲಿ ಪಾಲ್ಗೊಂಡು ವಾಪಸ್ ಮಂಗಳೂರಿಗೆ ತೆರಳುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ರಾಜ್ಯ ಹೆದ್ದಾರಿ 33 ಕೊಟ್ಟಗೆರೆ ಹೋಬಳಿ ಚಿಗಣಿಪಾಳ್ಯ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಮಂಗಳೂರಿನ ಬಜ್ಪೆ ಮೂಲದ ಕಿಶನ್ ಶೆಟ್ಟಿ (20) ಮತ್ತು ಭಟ್ಟರ ತೋಟ ಗ್ರಾಮದ ನಿವಾಸಿ ಫಿಲಿಪ್ ನೇರಿ ಲೋಬೋ (32) ಎಂದು ಗುರುತಿಸಲಾಗಿದೆ.

ಮೃತರು ಬೆಂಗಳೂರಿನಲ್ಲಿ ಕಂಬಳ ವೀಕ್ಷಿಸಿ ಮಂಗಳೂರಿಗೆ ಮರಳುತ್ತಿದ್ದ ವೇಳೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಬೋರ್‌ವೆಲ್ ಲಾರಿ ಅವರ ಕಾರಿಗೆ ಡಿಕ್ಕಿ ಹೊಡೆದಿದೆ.

ಕುಣಿಗಲ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular