ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಅರಳಹಳ್ಳಿ ಗ್ರಾಮದ ಕ್ರಾಸ್ ಬಳಿಯ ಬೀದರ್ ಬೆಂಗಳೂರು ರಾಜ್ಯ ಹೆದ್ದಾರಿ ಮೇಲೆ ಮೊಸಳೆ ಮುಖದ ಮೇಲೆ ವಾಹನದ ಚಕ್ರ ಹತ್ತಿಸಿ ಹತ್ಯೆ ಮಾಡಲಾಗಿದೆ
ಹೆದ್ದಾರಿ ಪಕ್ಕದಲ್ಲಿದ್ದ ಜಮೀನಿನಿಂದ ಮೊಸಳೆ ಬಂದಿರಬಹುದು ಎಂದು ಹೇಳಲಾಗುತ್ತಿದೆ ಶನಿವಾರ ರಾತ್ರಿ ರಸ್ತೆ ಮೇಲಿದ್ದ ಮೊಸಳೆಯ ಮುಖದ ಮೇಲೆ ಚಕ್ರ ಹತ್ತಿಸಿದ್ದರಿಂದ ರಕ್ತಸ್ರಾವವಾಗಿ ಮೊಸಳೆ ಸ್ಥಳದಲ್ಲಿ ಸಾವನ್ನಪ್ಪಿದೆ
ಘಟನೆಯನ್ನು ಕಂಡು ಜನರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.


