ರಾಯಚೂರು : ಮಾನ್ವಿ ಪಟ್ಟಣದ ಕುಂಬಾರ್ ಓಣಿ ಇರುವ ಅಮ್ಜದ್ ಖಾನ್ ವರ್ಷದ 35 ಯುವಕ ಮೊಬೈಲ್ ಟವರ್ ಏರಿ ಒಂದು ಗಂಟೆ ಕಾಲ ಹೈಡ್ರಾಮ ಮಾಡಿದ ಘಟನೆ ನಡೆದಿದೆ.
ಅವರ ತಮ್ಮ ಶೋಯಲ್ ಖಾನ್ ತಮ್ಮ ಸಮುದಾಯದ ಮುಸ್ಲಿಂ ಯುವತಿಯನ್ನು ಹಲವು ವರ್ಷದಿಂದ ಪ್ರೀತಿಸುತ್ತಿದ್ದ ಕಳೆದ ಹತ್ತು ದಿನಗಳ ಹಿಂದೆ ಯುವತಿಯೊಂದಿಗೆ ಪರಾರಿಯಾಗಿದ್ದನು.
ಹಲವು ದಿನಗಳಿಂದ ಮನೆಯಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆ ಮಾಡಿಸಿ ಎಂದು ಬಿಡಿಸುತ್ತಿದ್ದ ಶೋಯಲ್ ಖಾನ್. ಇದರ ಜೊತೆಗೆ ಅವರ ಸಮುದಾಯದ ಯುವತಿ ಇಬ್ಬರು ವ್ಯಕ್ತಿ ಇಬ್ರಾಹಿಂ ಖುರೇಶಿ ಮತ್ತು ಖುರೇಶಿ ಪ್ರತಿದಿನ ಅಮ್ಜದ್ ಖಾನ್ ನಿಮ್ಮ ತಮ್ಮನಿಗೆ ಅದೇ ಹುಡುಗಿಯ ಜೊತೆ ಮದುವೆ ಮಾಡಿಸು ದಿನನಿತ್ಯ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಅಮ್ಜದ್ ಖಾನ್ ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಿದ್ದರು.
ಇದಕ್ಕೆ ಬೇಸತ್ತು ಬೆಳಗ್ಗೆ ಮೊಬೈಲ್ ಟವರ್ ಏರಿ ಅಣ್ಣ ಅಮ್ಜದ್ ಖಾನ್ ಸಾಯಲು ಮುಂದಾಗಿದ್ದನು.ಸ್ಥಳೀಯರು ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸ್ಥಳಕ್ಕೆ ಪಿ.ಐ ವೀರಭದ್ರಯ್ಯ ಸ್ವಾಮಿ ಪೊಲೀಸ್ ತಂಡ ಜೊತೆಗೆ ಅಗ್ನಿಶಾಮಕ, ಪುರಸಭೆ ಸಿಬ್ಬಂದಿ ಸ್ನೇಹಿತರ ಸಾಯದಿಂದ ಮನವೊಲಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.


