Friday, March 13, 2026
Flats for sale
Homeಜಿಲ್ಲೆಪುತ್ತೂರು : ಕುದ್ಕಾಡಿ ಲೂಟಿ ಪ್ರಕರಣ : ಆರು ಆರೋಪಿಗಳ ಬಂಧನ.

ಪುತ್ತೂರು : ಕುದ್ಕಾಡಿ ಲೂಟಿ ಪ್ರಕರಣ : ಆರು ಆರೋಪಿಗಳ ಬಂಧನ.

ಪುತ್ತೂರು : ಬಡಗನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ಸೆ.7ರಂದು ಮನೆಯೊಂದರಲ್ಲಿ ನಡೆದ ಡಕಾಯಿತಿ ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ.

ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗುವ ಮೊದಲು ಡಕಾಯಿತರು ಕುಟುಂಬ ಸದಸ್ಯರನ್ನು ಕಟ್ಟಿಹಾಕಿದ್ದರು.

ಸುಧೀರ್ ಪೆರುವಾಯಿ, ಪಚ್ಚಂಬಳ ರವಿ, ಕಿರಣ್, ವಸಂತ್, ಫಸಲ್ ಮತ್ತು ನಿಜಾರ್ ಬಂಧಿತರು. ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಜಬ್ಬಾರ್ ಹತ್ಯೆ ಪ್ರಕರಣದಲ್ಲಿ ಬಂಧಿತ ರವಿಗೆ ಜೀವಾವಧಿ ಶಿಕ್ಷೆಯಾಗಿದೆ. ಡಕಾಯಿತಿ ಎಸಗಿದಾಗ ಪೆರೋಲ್ ಮೇಲೆ ಹೊರ ಬಂದಿದ್ದರು.

ಕದ್ದ ಚಿನ್ನ ಹಾಗೂ ಆರೋಪಿಗಳು ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular