ಧಾರವಾಡ :ಕಟ್ಟಡದ ಚಾವಣಿ ಬಹುತೇಕ ಹಾಳಾಗಿದ್ದು, ಮೇಲ್ಛಾವಣಿಯ ಹೆಂಚುಗಳು ಮುರಿದಿವೆ. ಕೆಲವು ಕಿಟಕಿ ಗಾಜುಗಳು ಮಾಯವಾಗಿವೆ. ಮಳೆ ಸುರಿದಾಗಲೆಲ್ಲ ಮೇಲ್ಛಾವಣಿಯಿಂದ ನೀರು ಸೋರುವುದು ಸಾಮಾನ್ಯ. ಜೋರು ಮಳೆಯಾದರೆ ತರಗತಿ ಕೊಠಡಿಗಳು ನೀರಿನಿಂದ ತುಂಬಿರುತ್ತವೆ ಎನ್ನುತ್ತಾರೆ ವಿದ್ಯಾರ್ಥಿಗಳು. ಆನ್ಲೈನ್ ತರಗತಿಗಳಿಗೆ ಅನುಕೂಲವಾಗುವಂತೆ ಕೆಲವು ತರಗತಿ ಕೊಠಡಿಗಳಲ್ಲಿ ಪ್ರೊಜೆಕ್ಟರ್ಗಳನ್ನು ಅಳವಡಿಸಲಾಗಿದೆ. ಆದರೆ, ಸೋರಿಕೆಯಾಗುವ ನೀರು ಈ ಪ್ರೊಜೆಕ್ಟರ್ಗಳ ಮೇಲೆ ಪರಿಣಾಮ ಬೀರುತ್ತಿದೆ. ಸೋರುವ ತರಗತಿ ಕೊಠಡಿಗಳಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸುವುದು ಇಲ್ಲಿನ ಶಿಕ್ಷಕರಿಗೆ ಅನಿವಾರ್ಯವಾಗಿದೆ. ನಗರದ ಗಾಂಧಿ ಚೌಕ್ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ 2014-15ನೇ ಸಾಲಿನಲ್ಲಿ ಕಾಲೇಜು ಆರಂಭಗೊಂಡಿದೆ. 2019ರಲ್ಲಿ ಈಗಿರುವ ಕಟ್ಟಡಕ್ಕೆ ಸ್ಥಳಾಂತರವಾಗಿತ್ತು.ಆದರೆ, ಅಧಿಕಾರಿಗಳು ಯಾಕೆ ಕಾಲೇಜನ್ನು ಇಂತಹ ಹಾಳಾದ ಕಟ್ಟಡಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡರು ಎಂಬುದು ಯಾರಿಗೂ ತಿಳಿದಿಲ್ಲ. ಅನಾಮಧೇಯತೆಯನ್ನು ಉಳಿಸಿಕೊಂಡಿರುವ ವಿದ್ಯಾರ್ಥಿಯೊಬ್ಬರು, ಕಾಲೇಜು ಕಟ್ಟಡವು ಅಪಾಯಕಾರಿ ಸ್ಥಿತಿಯಲ್ಲಿದೆ. ಮೇಲ್ಛಾವಣಿ ಯಾವಾಗ ಬೇಕಾದರೂ ಕುಸಿಯಬಹುದು. ಮಳೆ ಬಂದಾಗಲೆಲ್ಲ ತರಗತಿ ಕೊಠಡಿಗಳಲ್ಲಿ ಕೆಸರು ಮತ್ತು ಮಳೆ ನೀರು ಸಂಗ್ರಹವಾಗುತ್ತದೆ. ಆದರೆ, ವಿದ್ಯಾರ್ಥಿಗಳ ಸಮಸ್ಯೆ ಆಲಿಸುವವರೇ ಇಲ್ಲ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು .


