Sunday, March 15, 2026
Flats for sale
Homeಜಿಲ್ಲೆಉಳ್ಳಾಲ ; ಸೋಮೇಶ್ವರ ಬೀಚ್ ನಲ್ಲಿ ವಿಧ್ಯಾರ್ಥಿಗಳಿಂದ ಕೇರಳಸ್ಟೋರಿ ಸೀನ್ !

ಉಳ್ಳಾಲ ; ಸೋಮೇಶ್ವರ ಬೀಚ್ ನಲ್ಲಿ ವಿಧ್ಯಾರ್ಥಿಗಳಿಂದ ಕೇರಳಸ್ಟೋರಿ ಸೀನ್ !

ಉಳ್ಳಾಲ: ಸೋಮೇಶ್ವರ ಪ್ರಕರಣದಲ್ಲಿ ಅಮಾಯಕ ಯುವಕರ ಬಂಧನಕ್ಕೆ ಕಾರಣವಾದ ವಿದ್ಯಾರ್ಥಿನಿಯರನ್ನು ಹಾಗೂ ಯುವಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಬೇಕಿದೆ. ಮೂರು ದಿನಗಳಲ್ಲಿ ಪೊಲೀಸರು ಕ್ರಮಕೈಗೊಳ್ಳದೇ ಇದ್ದಲ್ಲಿ ವಿದ್ಯಾರ್ಥಿನಿಯರಿರುವ ಶಿಕ್ಷಣ ಸಂಸ್ಥೆಯ ಎದುರುಗಡೆ ಕುಳಿತು ಧರಣಿ ನಡೆಸುತ್ತೇವೆ ಎಂದು ಉಳ್ಳಾಲ ಮಹಿಳಾ ರಕ್ಷಣಾ ವೇದಿಕೆಯ ಧನಲಕ್ಷ್ಮೀ ಗಟ್ಟಿ ಹೇಳಿದ್ದಾರೆ.

ಸೋಮೇಶ್ವರ ನೈತಿಕ ಪೊಲೀಸ್‍ಗಿರಿ ಪ್ರಕರಣದಲ್ಲಿ ಬಂಧಿತರ ಮನೆಮಂದಿ ಹಾಗೂ ಉಳ್ಳಾಲದ ಮಹಿಳಾ ರಕ್ಷಣಾ ವೇದಿಕೆ ಕಾರ್ಯಕರ್ತರು ಉಳ್ಳಾಲ ಪೊಲೀಸ್ ಠಾಣಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ದ ಕೇರಳ ಸ್ಟೋರಿ ಸಿನೆಮಾದಂತಹ ವಾತಾವರಣದಲ್ಲಿ ಹಿಂದೂ ಹೆಣ್ಮಕ್ಕಳಿದ್ದಾರೆ ಅನ್ನುವುದಕ್ಕೆ ಸೋಮೇಶ್ವರದ ಘಟನೆಯೇ ಸಾಕ್ಷಿ. ಕಾನೂನು ಕೈಗೆತ್ತಿಕೊಂಡಿರುವರೆಂದು ಆರೋಪಿಸಿ ಅಮಾಯಕರನ್ನು ಬಂಧಿಸಲಾಗಿದೆ. ಕೇರಳದ ಹೆಣ್ಮಕ್ಕಳು ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಇರುವವರಾಗಿದ್ದಾರೆ. ಮೂವರು ಯುವತಿಯರಲ್ಲಿ ಒಬ್ಬಳಿಗೆ ಮುಸ್ಲಿಂ ಯುವಕನ ಸ್ನೇಹ ಮತ್ತು ಸಲುಗೆ ಇತ್ತು. ಆತನ ಒತ್ತಾಯಕ್ಕೆ ಮಣಿದು ಇಬ್ಬರು ಹೆಣ್ಮಕ್ಕಳನ್ನು ಕರೆತಂದಿದ್ದಾಳೆ. ಬಳಿಕ ಆರು ಮಂದಿ ಸೇರಿಕೊಂಡು ದೇವಸ್ಥಾನದ ಆವರಣದ ಸಮುದ್ರ ತೀರದಲ್ಲಿ ಮಲಗಿಕೊಂಡು ಲೈಂಗಿಕತೆಗೆ ಪ್ರಚೋದಿಸುವ ರೀತಿಯಲ್ಲಿ ವರ್ತಿಸುತ್ತಿದ್ದುದನ್ನು ಪ್ರತ್ಯಕ್ಷದರ್ಶಿಗಳು ಗಮನಿಸಿದ್ದಾರೆ. ಇದನ್ನು ಸ್ಥಳೀಯ ಯುವಕರು ವಿರೋಧಿಸಿದ್ದಾರೆ.

ಸೋಮೇಶ್ವರದಲ್ಲಿ ಅಮಾಯಕರನ್ನು ಬಂಧಿಸುವ ಮೂಲಕ ಅಮಾನವೀಯ ಘಟನೆ ನಡೆದಿದ್ದು, ಉಳ್ಳಾಲದ ತಾಯಂದಿಯರ ನಿದ್ದೆಗೆಡಿಸಿದೆ. ಕಾನೂನು ಪ್ರಕಾರ ಎರಡು ಕಡೆಗಳಲ್ಲಿಯೂ ತನಿಖೆ ನಡೆಯಬೇಕಿದೆ. ಆದರೆ ಮೂವರು ವಿದ್ಯಾರ್ಥಿನಿಯರ ಯಾವುದೇ ಹೇಳಿಕೆಗಳನ್ನು ದಾಖಲಿಸದೆ ಏಕಾಏಕಿ ಅವರನ್ನು ಹಾಸ್ಟೆಲ್‍ಗೆ ಬಿಟ್ಟು ಬಿಡಲಾಗಿದೆ. ಆದರೆ ಮೂವರು ಹೆಣ್ಮಕ್ಕಳ ಅಮಾಯಕ ಹೆತ್ತವರಿಗೆ ಘಟನೆ ಗಮನಕ್ಕೆ ತಾರದಿರುವುದು ದುರಂತ. ಇದೇ ರೀತಿಯಲ್ಲಿ ನಡೆದರೆ ದಾರಿಯಲ್ಲಿ ಹೆಣ್ಮಕ್ಕಳು ನಡೆಯುವಂತಹ ಸ್ಥಿತಿ ಇರುವುದಿಲ್ಲ.

ಆಸ್ಪತ್ರೆಯಲ್ಲಿರುವ ಯುವಕರು ಅಲ್ಲಿಂದ ನೇರವಾಗಿ ಮನೆಗೆ ತೆರಳಿದ ನಂತರ ಜಿಹಾದಿ ಸಂಸ್ಕøತಿಯನ್ನು ಮುಂದುವರಿಸುವುದರಲ್ಲಿ ಸಂಶಯವಿಲ್ಲ. ಶೀಘ್ರವೇ ಪೊಲೀಸ್ ಇಲಾಖೆ ಬಂಧಿತರಿಗೆ ನ್ಯಾಯ ಒದಗಿಸಿಕೊಡಬೇಕು. ಆಸ್ಪತ್ರೆಯಲ್ಲಿ ಇರುವ ಯುವಕರ ಸಮಗ್ರ ತನಿಖೆ ನಡೆಯಬೇಕಿದೆ. ಮೂವರು ಯುವಕರು ಜಿಹಾದಿ ಮನಸ್ಥಿತಿಯನ್ನು ಪ್ರೇರೇಪಿಸಲು ಬಂದವರೇ ? ಅಥವಾ ನೈಜ ಸ್ನೇಹಿತರೇ ಅನ್ನುವ ತನಿಖೆ ಆಗಬೇಕು. ಹೆಣ್ಮಕ್ಕಳ ಪೋಷಕರನ್ನು ಕರೆಸುವ ಭರವಸೆಯನ್ನು ಠಾಣಾಧಿಕಾರಿಗಳು ನೀಡಿದ್ದಾರೆ.

ಬಂಧನಕ್ಕೊಳಗಾಗಿರುವ ಅಮಾಯಕರಿಗೆ ನೆರವಾಗುವಂತೆ ಹೆಣ್ಮಕ್ಕಳು ವರ್ತಿಸಬೇಕಿದೆ. ವೀಡಿಯೋ ಇದ್ದರೂ ಈವರೆಗೆ ವೈರಲ್ ಮಾಡದೇ ಇರುವುದು ಹೆಣ್ಮಕ್ಕಳ ಮೇಲೆ ಇಟ್ಟಿರುವ ಗೌರವವಾಗಿದೆ. ಕಾನೂನು ಕೈಗೆತ್ತಿಕೊಳ್ಳದೆ ಠಾಣೆಗೆ ಕರೆಮಾಡಬೇಕಿದೆ.ಪೊಲೀಸರು ಮನವಿಗೆ ಸ್ಪಂಧಿಸದೇ ಇದ್ದಲ್ಲಿ ಮೂರು ದಿನಗಳೊಳಗೆ ನಾವೇ ನೇರವಾಗಿ ವಿದ್ಯಾರ್ಥಿನಿಯರು ಇರುವ ಹಾಸ್ಟೆಲ್ ಅಥವಾ ಅವರವರ ಮನೆಗೆ ತೆರಳಿ ಹೆತ್ತವರ ಗಮನಕ್ಕೆ ತರುತ್ತೇವೆ. ಎಲ್ಲರನ್ನು ಹುಡುಕಿ ಠಾಣೆಗೆ ಕರೆಸಿ ಬಂಧಿತ ಅಮಾಯಕರಿಗೆ ನ್ಯಾಯ ಸಿಗುವಂತೆ ಮಾಡುತ್ತೇವೆ ಎಂದರು.
ಈ ಸಂದರ್ಭ ವೇದಿಕೆಯ ಹಲವು ಸದಸ್ಯರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular